Select Your Language

Notifications

webdunia
webdunia
webdunia
webdunia

ಹಳ್ಳಿಯಲ್ಲಿ ನವೀನ್ ಕೃಷ್ಣ ‘ಈ ಕಲರವ’

ಹಳ್ಳಿಯಲ್ಲಿ ನವೀನ್ ಕೃಷ್ಣ ‘ಈ ಕಲರವ’
Bangalore , ಸೋಮವಾರ, 16 ಜನವರಿ 2017 (12:59 IST)
ಗ್ರಾಮೀಣ ಸೊಗಡಿನ ನೈಜಕಥೆ, ಹಾಸ್ಯ ಕಥಾಹಂದರ ಹೊಂದಿದರುವ ಚಿತ್ರ ’ಈ ಕಲರವ’. ಈ ಚಿತ್ರದಲ್ಲಿ ಪ್ರೀತಿ ಹಾಗೂ ಒಂದು ಸಾಮಾಜಿಕ ಸಮಸ್ಯೆಯನ್ನು ನಿರೂಪಿಸಲಾಗಿದೆ.  ಅದನ್ನು ಹಾಸ್ಯರೂಪದಲ್ಲಿ ಬಿಚ್ಚಿಡುವ ಪ್ರಯತ್ನ ಈ ಚಿತ್ರದಲ್ಲಿ ಮಾಡಲಾಗಿದೆ.  ಕೆ.ಆರ್. ನಗರದ ತಿಪ್ಪೂರು ಎಂಬ ಪುಟ್ಟಗ್ರಾಮದಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. 
 
ಇಡೀ ಚಿತ್ರ ಇದೊಂದೇ ಊರಿನಲ್ಲಿ ಚಿತ್ರಿತವಾಗಿರುವುದು ಚಿತ್ರದ ವಿಶೇಷ. ಎಂ.ಎಂ.ಜಿ. ಫಿಲಂಸ್ ಲಾಂಛನದಲ್ಲಿ ಎಂ.ಮಹದೇವಗೌಡ ಅವರು ನಿರ್ಮಿಸುತ್ತಿರುವ ‘ಈ ಕಲರವ’ ಎಂಬ ಚಿತ್ರಕ್ಕೆ ಈ ಹಿಂದೆ ಬಿ.ಕೊ. ಚಿತ್ರ ನಿರ್ದೇಶಿಸಿದ್ದ ಸಂದೀಪ್ ದಕ್ಷ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.  
 
ಈ ಚಿತ್ರಕ್ಕೆ ಪೀಟರ್ ಎಂ.ಜೋಸೆಫ್, ಹಾಗೂ ಪ್ರಕಾಶ್ ಬಾಬು ಸಂಗೀತ, ಕುಮಾರ್ ಜಿ - ಛಾಯಾಗ್ರಹಣ, ರವಿಚಂದ್ರನ್-ಸಂಕಲನ, ಸುಬ್ಬು, ಅಶೋಕ್-ಸಾಹಸ, ಧನುಕುಮಾರ್ - ನೃತ್ಯ ನಿರ್ದೇಶನ, ಸಂದೀಪ್‍ದಕ್ಷ್ - ಸಾಹಿತ್ಯ, ನಿಖಿಲ್ ನಾಚಪ್ಪ ಸಹನಿರ್ದೇಶನವಿದೆ. ನವೀನ್ ಕೃಷ್ಣ, ರೋಹಿಣಿ, ಭಾರಧ್ವಾಜ್, ಲಕ್ಷ್ಮೀ, ರಶ್ಮಿ, ಮೈಸೂರು ಶೋಭಾ, ನಿಹಾರಿಕಾ, ಮಹಾದೇವೇಗೌಡ, ಪದ್ದುಶೇಖರ್, ಸಂತೋಷ್, ಪ್ರಿಯ ಇನ್ನು ಮುಂತಾದವರ ತಾರಾಬಳಗವಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯಕ್ಕೆ ಬರೋ ಮಾತೇ ಆಡಿಲ್ಲ, ಆಗಲೇ ರಜನಿ ವಿರುದ್ಧ ತೊಡೆ ತಟ್ಟಿದ ನಟ