Webdunia - Bharat's app for daily news and videos

Install App

ಇತರರೆದುರು ಬೆಳೆಯಲು ಅಸೂಯೆ ಉತ್ತಮ ಆಯುಧ: ಆಲಿಯಾ ಭಟ್

Webdunia
ಶುಕ್ರವಾರ, 22 ಮೇ 2015 (10:23 IST)
ಅಸೂಯೆ, ದ್ವೇಷ ನಮಗಿಲ್ಲ ಎಂದು ಕೆಲವರು ಹೇಳುತ್ತಿರುತ್ತಿರುತ್ತಾರೆ. ಆದರೆ ಅವೆಲ್ಲಾ ಇದ್ದಾಗ ಮಾತ್ರ ನಾವು ಪರಿಪೂರ್ಣವಾದ ಮನುಷ್ಯರೆಂದು ಕರೆಯಿಸಿಕೊಳ್ಳುವುದು ಎಂದು ಹೇಳಿರೋದು ಅಲಿಯ ಭಟ್. ಬಾಲಿವುಡ್ ಚಿತ್ರರಂಗದ ಈ ಮುದ್ದು ಮುದ್ದಾದ ನಟಿ ತನಗಿರುವ ಜ್ಞಾನವನ್ನು ಸದಾ ಬೇರೆಯವರಿಗೆ ಹಂಚುವುದರಲ್ಲಿ ಮಗ್ನರಾಗಿರುತ್ತಾರೆ. ಅದರ ಒಂದು ಭಾಗ ಈ ಮೇಲೆ ಹೇಳಿರುವ ಮಾತುಗಳಾಗಿವೆ. ನಟಿಯರಲ್ಲಿ ಯಾರಿಗಾದರೂ ಉತ್ತಮ ಫಿಸಿಕ್ ಇದ್ದಲ್ಲಿ ನನಗೆ ಸಿಕ್ಕಾಪಟ್ಟೆ ಅಸೂಯೆ ಉಂಟಾಗುತ್ತದೆ. ಆ ತಾರೆಯರಿಗಿಂತ ನನ್ನ ದೇಹಾಕೃತಿ ಚೆನ್ನಾಗಿ ರೂಪಿತವಾಗಬೇಕು ಎನ್ನುವ ಹಾಗೂ ಅತ್ಯುತ್ತಮ ನಟಿಯಾಗಿ ಬೆಳೆಯ ಬೇಕು ಎಂಬ ಸಂಗತಿ ಹೆಚ್ಚು  ದೃಢವಾಗುತ್ತದೆ ಎಂದು ಸಹಿತ ಈಕೆ ಹೇಳಿದ್ದಾರೆ. 
ಅಸೂಯೆಯಿಂದ ಹೊಟ್ಟೆ ಉರಿಯುತ್ತದೆ. ಅದೇ ನನ್ನನ್ನು ಹೆಚ್ಚು ವರ್ಕ್ ಔಟ್ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ನನ್ನ ಅಸೂಯೆ ವೃತ್ತಿಗೆ ಸಂಬಂಧಪಟ್ಟಿರುವುದು, ಆದರೆ ಅದನ್ನು ಎಂದಿಗೂ ನಾನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ನನಗೆ ವೈಯಕ್ತಿಕವಾಗಿ ಯಾರ ಬಗ್ಗೆಯೂ ಅಸೂಯೆ, ದ್ವೇಷಗಳು ಇಲ್ಲ. ಈಗ ಹಿಂದಿ ಚಿತ್ರರಂಗದಲ್ಲಿ ಹೊಸ ನಾಯಕಿಯರು  ಪರಿಚಯ ಆಗುತ್ತಿರುತ್ತಾರೆ. ಅವರ  ಮುಂದೆ  ಗಟ್ಟಿಯಾಗಿ ನಿಲ್ಲಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ಬೇಕು. ಅಂತಹ ಸಮಯದಲ್ಲಿ ಅಸೂಯೆಯನ್ನು ನಾನು ಆಯುಧವನ್ನಾಗಿ ಮಾಡಿಕೊಳ್ಳುತ್ತೇನೆ. ನಾನು ಈ ರೀತಿ ಹೇಳುತ್ತಿರುವ ಬಗ್ಗೆ ತಪ್ಪು ತಿಳಿಯ ಬೇಡಿ, ನನ್ನ ಮಾತುಗಳು ಯಾರನ್ನು ಉದ್ದೇಶ ಮಾಡಿಲ್ಲ. ನನ್ನ ಅಭಿಪ್ರಾಯವನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದಿದ್ದಾರೆ ಈ ಮುದ್ದು ತಾರೆ.    

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments