Select Your Language

Notifications

webdunia
webdunia
webdunia
webdunia

ಇತರರೆದುರು ಬೆಳೆಯಲು ಅಸೂಯೆ ಉತ್ತಮ ಆಯುಧ: ಆಲಿಯಾ ಭಟ್

ಇತರರೆದುರು ಬೆಳೆಯಲು ಅಸೂಯೆ ಉತ್ತಮ ಆಯುಧ: ಆಲಿಯಾ ಭಟ್
, ಶುಕ್ರವಾರ, 22 ಮೇ 2015 (10:23 IST)
ಅಸೂಯೆ, ದ್ವೇಷ ನಮಗಿಲ್ಲ ಎಂದು ಕೆಲವರು ಹೇಳುತ್ತಿರುತ್ತಿರುತ್ತಾರೆ. ಆದರೆ ಅವೆಲ್ಲಾ ಇದ್ದಾಗ ಮಾತ್ರ ನಾವು ಪರಿಪೂರ್ಣವಾದ ಮನುಷ್ಯರೆಂದು ಕರೆಯಿಸಿಕೊಳ್ಳುವುದು ಎಂದು ಹೇಳಿರೋದು ಅಲಿಯ ಭಟ್. ಬಾಲಿವುಡ್ ಚಿತ್ರರಂಗದ ಈ ಮುದ್ದು ಮುದ್ದಾದ ನಟಿ ತನಗಿರುವ ಜ್ಞಾನವನ್ನು ಸದಾ ಬೇರೆಯವರಿಗೆ ಹಂಚುವುದರಲ್ಲಿ ಮಗ್ನರಾಗಿರುತ್ತಾರೆ. ಅದರ ಒಂದು ಭಾಗ ಈ ಮೇಲೆ ಹೇಳಿರುವ ಮಾತುಗಳಾಗಿವೆ. ನಟಿಯರಲ್ಲಿ ಯಾರಿಗಾದರೂ ಉತ್ತಮ ಫಿಸಿಕ್ ಇದ್ದಲ್ಲಿ ನನಗೆ ಸಿಕ್ಕಾಪಟ್ಟೆ ಅಸೂಯೆ ಉಂಟಾಗುತ್ತದೆ. ಆ ತಾರೆಯರಿಗಿಂತ ನನ್ನ ದೇಹಾಕೃತಿ ಚೆನ್ನಾಗಿ ರೂಪಿತವಾಗಬೇಕು ಎನ್ನುವ ಹಾಗೂ ಅತ್ಯುತ್ತಮ ನಟಿಯಾಗಿ ಬೆಳೆಯ ಬೇಕು ಎಂಬ ಸಂಗತಿ ಹೆಚ್ಚು  ದೃಢವಾಗುತ್ತದೆ ಎಂದು ಸಹಿತ ಈಕೆ ಹೇಳಿದ್ದಾರೆ. 
ಅಸೂಯೆಯಿಂದ ಹೊಟ್ಟೆ ಉರಿಯುತ್ತದೆ. ಅದೇ ನನ್ನನ್ನು ಹೆಚ್ಚು ವರ್ಕ್ ಔಟ್ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ನನ್ನ ಅಸೂಯೆ ವೃತ್ತಿಗೆ ಸಂಬಂಧಪಟ್ಟಿರುವುದು, ಆದರೆ ಅದನ್ನು ಎಂದಿಗೂ ನಾನು ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ. ನನಗೆ ವೈಯಕ್ತಿಕವಾಗಿ ಯಾರ ಬಗ್ಗೆಯೂ ಅಸೂಯೆ, ದ್ವೇಷಗಳು ಇಲ್ಲ. ಈಗ ಹಿಂದಿ ಚಿತ್ರರಂಗದಲ್ಲಿ ಹೊಸ ನಾಯಕಿಯರು  ಪರಿಚಯ ಆಗುತ್ತಿರುತ್ತಾರೆ. ಅವರ  ಮುಂದೆ  ಗಟ್ಟಿಯಾಗಿ ನಿಲ್ಲಲು ಸಾಕಷ್ಟು ಸಿದ್ಧತೆ ಮಾಡಿಕೊಳ್ಳ ಬೇಕು. ಅಂತಹ ಸಮಯದಲ್ಲಿ ಅಸೂಯೆಯನ್ನು ನಾನು ಆಯುಧವನ್ನಾಗಿ ಮಾಡಿಕೊಳ್ಳುತ್ತೇನೆ. ನಾನು ಈ ರೀತಿ ಹೇಳುತ್ತಿರುವ ಬಗ್ಗೆ ತಪ್ಪು ತಿಳಿಯ ಬೇಡಿ, ನನ್ನ ಮಾತುಗಳು ಯಾರನ್ನು ಉದ್ದೇಶ ಮಾಡಿಲ್ಲ. ನನ್ನ ಅಭಿಪ್ರಾಯವನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದಿದ್ದಾರೆ ಈ ಮುದ್ದು ತಾರೆ.    

Share this Story:

Follow Webdunia kannada