Select Your Language

Notifications

webdunia
webdunia
webdunia
webdunia

ಹಿಂದಿ ಚಿತ್ರ ನಿರ್ದೇಶನದತ್ತ ನಿರ್ದೇಶಕ ಎಸ್ ನಾರಾಯಣ್ ?

ಹಿಂದಿ  ಚಿತ್ರ ನಿರ್ದೇಶನದತ್ತ ನಿರ್ದೇಶಕ ಎಸ್ ನಾರಾಯಣ್ ?
, ಸೋಮವಾರ, 20 ಏಪ್ರಿಲ್ 2015 (11:59 IST)
ಎಸ್ ನಾರಾಯಣ್ ಕನ್ನಡ ಸಿನಿಮಾ ಇಂಡಸ್ಟ್ರಿಯ ಅಸಾಮಾನ್ಯ ನಿರ್ದೇಶಕ. ಅವರಿಗೆ ತಮ್ಮ 25ನೇ ವರ್ಷದ ಸಾಧನೆಯಲ್ಲಿ ಅಪರೂಪದ ಅವಕಾಶ ಹುಡುಕಿಕೊಂಡು ಬಂದಿದೆ. ಅವರು ಹಿಂದಿ  ಚಿತ್ರವನ್ನು ನಿರ್ದೇಶನ ಮಾಡುವಂತಹ ಅವಕಾಶ ಪಡೆದುಕೊಂಡಿದ್ದಾರೆ. ಈ ಚಿತ್ರ ಮೇ ಎರಡನೇ ವಾರದಿಂದ ಕೆಲಸ ಆರಂಭ ಮಾಡಲಿದೆ. 

ಎಸ್ ನಾರಾಯಣ್ ಅವರು ಈಗ ದಕ್ಷ ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶನ ಮಾಡಿ ಬಾಲಿವುಡ್ ಜನರ ಮುಂದೆ ಇಡುವತ್ತ ತಮ್ಮ ಸಾಧನೆಯ ಹರಿವನ್ನು ವಿಸ್ತಾರ ಮಾಡಿದ್ದಾರೆ. ಕನ್ನಡದಲ್ಲಿ ಸಿದ್ಧವಾಗಿರುವ ದಕ್ಷ ಚಿತ್ರವು 24ರಂದು ಬಿಡುಗಡೆ ಆಗಲಿದೆ. ಈ ಸಂಗತಿಯನ್ನು ನಿರ್ಮಾಪಕರು ತಿಳಿಸಿದ್ದಾರೆ. ಕನ್ನಡ ಚಿತ್ರ ಬಿಡುಗಡೆ ಆದ ಬಳಿಕ ಹಿಂದಿ ಚಿತ್ರದ ತಂಡವನ್ನು ತಿಲಿಸುತ್ತಾರೆನ್ನುವ ಸಂಗತಿ ಹೊರ ಬಂದಿದೆ.  
 
ಆದರೆ ಎಸ್ ನಾರಾಯಣ್ ಅವರು ಹೊಸತಂಡದ ಜೊತೆ ನಿರ್ದೇಶನದ ಕೆಲಸ ಮಾಡುತ್ತಾರೋ ಅಥವಾ ಕನ್ನಡ ದಕ್ಷ ಸಿನಿ ತಂಡದ ಜೊತೆಗೆ ಕೆಲಸ ಮಾಡುತ್ತಾರೋ ಎನ್ನುವುದು ಸ್ಪಷ್ಟವಾಗಿಲ್ಲ. ಕನ್ನಡದ ದಕ್ಷದಲ್ಲಿ ವಿಜಯ್ ಹೀರೋ ಆಗಿದ್ದಾರೆ. ಏನೇ ಆದರೂ ಕನ್ನಡದ ಪ್ರತಿಭಾವಂತ ನಿರ್ದೇಶಕರ ಪ್ರತಿಭೆ ಬಾಲಿವುಡ್ ನತ್ತಲ್ಲೂ ಹರಡಿರುವುದು ಅತ್ಯಂತ ಸಂತಸ ಸಂಗತಿಯಾಗಿದೆ ಕನ್ನಡಿಗರಿಗೆ ಎನ್ನುವುದು ಸುಳ್ಳಲ್ಲ. 

Share this Story:

Follow Webdunia kannada