Webdunia - Bharat's app for daily news and videos

Install App

ಮತ್ತೆ ಪರದೆ ಸಿಂಗರಿಸಲು ಬಂದ ನಾಗತಿಹಳ್ಳಿ ಚಂದ್ರಶೇಖರ್

Webdunia
ಬುಧವಾರ, 1 ಜುಲೈ 2015 (10:09 IST)
ಕನ್ನಡ ಚಿತ್ರರಂಗದ ವಿಭಿನ್ನ ನಿರ್ದೇಶಕ ನಾಗತಿ ಹಳ್ಳಿ ಚಂದ್ರಶೇಖರ್. ಅವರ ನಿರ್ದೇಶನದ ಚಿತ್ರಗಳು ಅವರ ಬರಹಗಳಷ್ಟೇ ಭಿನ್ನ ಹಾಗೂ ವಿಶಿಷ್ಟ. ಅನೇಕಾನೇಕ ಉತ್ತಮ ಕನ್ನಡ ಚಿತ್ರಗಳನ್ನು ನೀಡಿದ್ದ ನಾಗ್ತಿ ಮೇಷ್ಟ್ರು ಮತ್ತೆ ನಿರ್ದೇಶನದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಬಾ ನಲ್ಲೆ ಮಧುಚಂದ್ರಕೆ, ನನ್ನ ಪ್ರೀತಿಯ ಹುಡುಗಿ, ಅಮೆರಿಕ ಅಮೆರಿಕ, ಅಮೃತಧಾರೆ ಹೀಗೆ ಹತ್ತುಹಲವಾರು ಚಿತ್ರಗಳ ನಿರ್ದೇಶನ ಮಾಡಿದ್ದಾರೆ. 
ಕನ್ನಡ ಚಿತ್ರರಂಗದಲ್ಲಿ ಹೊಸಭಾಷ್ಯ ಬರೆದಿದ್ದ ನಾಗ್ತಿ ಅವರ ನಿರ್ದೇಶನದ ಕೆಲವು ಚಿತ್ರಗಳು ಸೋತು ಹೈರಾಣಾಗಿದ್ದು ಸುಳ್ಳಲ್ಲ. ಆದಕಾರಣ ಅವರು ಸ್ವಲ್ಪ ವಿರಾಮ ತೆಗೆದುಕೊಂಡು ಈಗ ಮತ್ತೇ ಕನ್ನಡ ಪ್ರೇಕ್ಷಕರ ಮನರಂಜಿಸಲು ಸಿದ್ಧರಾಗುತ್ತಿದ್ದಾರೆ. ಈಗ ಅವರು ದೊಡ್ಡೇರಿ ವೆಂಕಟಗಿರಿ ಕಥೆ ಇಷ್ಟಕಾಮ್ಯ ವನ್ನು ಚಿತ್ರರೂಪಕ್ಕೆ ತರಲು ಸಿದ್ಧರಾಗಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳಲ್ಲಿ  ನಟಿಸಲು ನಾಗ್ತಿ ಅವರು ಟೀವಿ ಕಲಾವಿದರಾದ ವಿಜಯ್ ಸೂರ್ಯ,ಮಯೂರಿ ಮತ್ತು ಕಾವ್ಯ ಶೆಟ್ಟಿಯನ್ನು ಆಯ್ಕೆ ಮಾಡಿದ್ದಾರೆ. 50 ದಿನಗಳ ಕಾಲ ಚಿತ್ರೀಕರಣ ನಡೆಯುವ ಈ ಚಿತ್ರ ಚಿಕ್ಕಮಗಳೂರ್ ಅದರ ಸುತ್ತಮುತ್ತಲು ನಡೆಯಲಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಇರುವ ಈ ಚಿತ್ರಕ್ಕೆ ರವಿಕುಮಾರ್  ಸನ ಛಾಯಾಗ್ರಹಣ, ಶಂಕರ್ ಗೌಡ ನಿರ್ಮಾಣವಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments