Select Your Language

Notifications

webdunia
webdunia
webdunia
webdunia

ಶ್ರಾವ್ಯ ಬದುಕಿನ ಮರೆಯಲಾಗದ ಘಟನೆಗೆ ಮೂಲವೇ ನಾಗರಕಟ್ಟೆ ?

ಶ್ರಾವ್ಯ ಬದುಕಿನ ಮರೆಯಲಾಗದ ಘಟನೆಗೆ ಮೂಲವೇ ನಾಗರಕಟ್ಟೆ ?
, ಸೋಮವಾರ, 18 ಮೇ 2015 (09:44 IST)
ತಾವರೆಕೆರೆಯ ಭೂತ ಬಂಗಲೆಯಲ್ಲಿ ನಾಗರಕಟ್ಟೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಶ್ರೀ ಸಾಯಿ ವೆಂಚರ್ಸ್ ಲಾಂಛನದಲ್ಲಿ  ಈ ಚಿತ್ರ ನಿರ್ಮಾಣ ಆಗುತ್ತಿದೆ. ಇತ್ತೀಚೆಗೆ ಆ ಭೂತಬಂಗಲೆಯಲ್ಲಿ  ನಿರ್ಮಿಸಿದ್ದ ಸೆಟ್ನಲ್ಲಿ  ಅನಿಶ್, ಸುಚೀಂದ್ರ ಪ್ರಸಾದ್, ದ್ವಾರಕೀಶ್, ಅವಿನಾಶ್, ಶರತ್ ಲೋಹಿತಾಶ್ವ, ಶ್ರಾವ್ಯ ಅಭಿನಯಿಸಿದರು. ಆ ದೃಶ್ಯಗಳ ಚಿತ್ರೀಕರಣಕ್ಕೆಂದು ಹಾಕಿದ್ದ ಸೆಟ್ 30 ಲಕ್ಷ ರೂಪಾಯಿಗಳು. ಆದರೆ ಕಳೆದವಾರ ಸುರಿದ ಭಾರಿ ಮಳೆಯ ಕಾರಣದಿಂದ ಸೆಟ್ ಹಾನಿಗೊಳಗಾಯಿತು. ಈಗ ಪುನರ್ ನಿರ್ಮಾಣ ಮಾಡಿ ಚಿತ್ರೀಕರಣ ನಡೆಸಲಾಯಿತು. 
ಸಿನಿತಂಡದ ಈ ಸಾಹಸ, ಕಷ್ಟ ಸಹಿಷ್ಣುತೆಗೆ  ಹಿರಿಯ ನಟರುಗಳಿಂದ ಪ್ರಶಂಸೆ ದೊರೆಯಿತು. ಶ್ರಾವ್ಯಾಳನ್ನು ಮೊದಲ ದೃಶ್ಯದಲ್ಲಿ ಸತ್ತ ಹೆಣವಾಗಿ ತೋರಿಸಲಾಯಿತಂತೆ.ನನ್ನ ಜೀವನದಲ್ಲಿ ಮರೆಯಲಾಗದ ಒಂದು ವಿಷ್ಯ ಎಂದಿದ್ದಾಳೆ ಶ್ರಾವ್ಯ.ನಾಲ್ಕು ಕ್ಯಾಮೆರಾ, ಜಿಮ್ಮಿ, ಪ್ರೊಪೈಲರ್ ಬಳಸಿ ಹೊಸ ರೀತಿಯ ಫೈಟೊಂದನ್ನು  ಸಾಹಸ ನಿರ್ದೇಶಕ ವಿಕ್ರವನ್ ಮೋರ್  ಹೊಸ ಬಗೆಯಲ್ಲಿ ಸಾಹಸ ದೃಶ್ಯದ ಕೊರಿಯಾಗ್ರಫಿ ಮಾಡಿದ್ದಾರಂತೆ.
 
18ನೇ ಕ್ರಾಸ್  ನಿರ್ದೇಶನ ಮಾಡಿ ಭರವಸೆ ಮೂಡಿಸಿರುವ  ಶಂಕರ್ ಅವರು ಬದ್ಮಾಶ್ ಚಿತ್ರಕ್ಕೆ ಕಥೆ-ಚಿತ್ರಕತೆ-ಸಂಭಾಷಣೆ-ನಿರ್ದೇಶನ ಮಾಡುತ್ತಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ,ಮದನ್ ಹರಿಣಿ ನೃತ್ಯ,ಯೋಗರಾಜ್ ಭಟ್ , ಕೆ ಕಲ್ಯಾಣ್ ಸಾಹಿತ್ಯ ಚಿತ್ರಕ್ಕಿದೆ. ಅನೀಶ್ ತೇಜೇಶ್ವರ್, ನಿಹಾರಿಕಾ, ಶ್ರಾವ್ಯ, ದ್ವಾರ್ಕೀಶ್, ಅವಿನಾಶ್, ಶರತ್ ಲೋಕಿತಾಶ್ವ, ಚಿಕ್ಕಣ್ಣ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. 

Share this Story:

Follow Webdunia kannada