ಬೆಂಗಳೂರು: ಮುಕುಂದ ಮುರಾರಿ ಚಿತ್ರದಲ್ಲಿ ಮುರಾರಿ ಪಾತ್ರಧಾರಿ ಸುದೀಪ್ ಉಪೇಂದ್ರರನ್ನು ಕೂರಿಸಿಕೊಂಡು ಹೋಗುವ ಬೈಕ್ ನೀವು ನೋಡಿರಬಹುದು. ಅದನ್ನೀಗ ಹರಾಜು ಹಾಕುತ್ತಾರಂತೆ.
ಈ ಸಿನಿಮಾಕ್ಕಾಗಿಯೇ ಮುಂಬೈನಲ್ಲಿ ಈ ಬೈಕ್ ವಿನ್ಯಾಸಗೊಳಿಸಲಾಗಿತ್ತು. ಅದನ್ನೀಗ ನವಂಬರ್ 11 ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಕೊಳ್ಳುವವರಿಗೆ ಕೊಳ್ಳಬಹುದು ಎಂದು ಚಿತ್ರದ ವಿತರಕ ಮಂಜು ಹೇಳಿದ್ದಾರೆ. ಒಂದು ಒಳ್ಳೆಯ ಉದ್ದೇಶಕ್ಕಾಗಿ ಹರಾಜು ಮಾಡಲಾಗುತ್ತಿದೆಯಂತೆ.
ಈ ಬೈಕ್ ನ್ನು ನಿನ್ನೆ ಬೆಂಗಳೂರಿನ ಮನೇಕಾ ಥಿಯೇಟರ್ ಎದುರುಗಡೆ ಪ್ರದರ್ಶನಕ್ಕೆ ಇಡಲಾಗಿದೆ. ಮುಂದೆ ಇದನ್ನು ಮೈಸೂರು, ತುಮಕೂರು, ದಾವಣೆಗೆರೆ ಮುಂತಾದೆಡೆ ಪ್ರದರ್ಶನಕ್ಕಿಡಲಾಗುವುದು. ಮತ್ತೆ ಮನೇಕಾ ಥಿಯೇಟರ್ ಮುಂದೆ ನವಂಬರ್ 9 ರಂದು ಪ್ರದರ್ಶನಕ್ಕಿಟ್ಟು 11 ರಂದು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ವಿತರಕರು ಹೇಳಿದ್ದಾರೆ.
ಈಗಾಗಲೇ ಸುದೀಪ್ ಮತ್ತು ಉಪೇಂದ್ರ ಅಭಿಮಾನಿಗಳು ಕೊಳ್ಳಲು ಮುಂದೆ ಬರುತ್ತಿದ್ದು, 2 ಲಕ್ಷ ರೂ.ವರೆಗೆ ಬೆಲೆ ಬಂದಿದೆ. ಆದರೂ ನವಂಬರ್ 11 ರವರೆಗೆ ಕಾಯುವುದಾಗಿ ಮಂಜು ಹೇಳಿದ್ದಾರೆ. ಬೈಕ್ ಮಾರಿ ಬಂದ ಹಣವನ್ನು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳಿಗೆ ದೇಣಿಗೆ ನೀಡುವ ಯೋಜನೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ