Webdunia - Bharat's app for daily news and videos

Install App

ಗಣೇಶ್ ಅಭಿನಯದ ಮುಂಗಾರು ಮಳೆ ಮತ್ತೆ ಸುರಿಯಲು ಸಿದ್ಧತೆ

Webdunia
ಮಂಗಳವಾರ, 25 ನವೆಂಬರ್ 2014 (09:58 IST)
ಯೋಗರಾಜ್ ಭಟ್ ನಿರ್ದೇಶನ, ಈ ಕೃಷ್ಣಪ್ಪ ಅವರ ನಿರ್ಮಾಣದಲ್ಲಿ ತಯಾರಾದ ಚಿತ್ರ ಮುಂಗಾರು ಮಳೆ.  ಮಳೆಯು ಗೋಲ್ಡನ್ ಸ್ಟಾರ್ ಗಣೇಶ್, ಯೋಗರಾಜ್ ಭಟ್ ಮತ್ತು ಕೃಷ್ಣಪ್ಪ ಅವರಿಗೆ ಜೀವದಾನ ಮಾಡಿತು. ಒಂದು ವರ್ಷಗಳ ಕಾಲ ಈ ಚಿತ್ರ ನಿರಂತರವಾಗಿ ಥಿಯೇಟರ್ ನಲ್ಲಿ ಇತ್ತು.

ಆದಾದ ಬಳಿಕ ಬಂದ ಗಣೇಶ್ ಚಿತ್ರಗಳಲಿ ಒಂದಷ್ಟು ಮಾತ್ರ ಜೀವ ಕಂಡಿತು, ಉಳಿದೆಲ್ಲವೂ ಮಕಾಡೆ ಮಲಗಿದ್ದು ಹಳೆ ಸಂಗತಿ. ಆದರೆ ಆ ಮುಂಗಾರು ಮಳೆಯ ಯಶಸ್ಸು ಇನ್ನು ನಿರ್ಮಾಪಕ ಮತ್ತು ಗಣೇಶ್ ಮನದಲ್ಲಿ ಸಿಹಿ ಅಲೆ ನೀಡಿದ್ದರಿಂದ ಆ ಚಿತ್ರದ ಭಾಗ 2 ಎರಡು ನಿರ್ಮಾಣದ ಬಗ್ಗೆ ಗಮನ ನೀಡಿದ್ದಾರೆ.
 
ಅಂದರೆ ಮುಂಗಾರು ಮಳೆ 2  ಚಿತ್ರ ಈಗ ಸಿದ್ಧತೆ ನಡೆಸಿದೆ ಜನರ ಮುಂದೆ ಬರಲು. ಅದರ  ಸ್ಕ್ರಿಪ್ಟ್‌ ಗೆ ನಿನ್ನೆ, ಎಂದರೆ ಸೋಮವಾರ ಪೂಜೆ ಮಾಡಲಾಯಿತು. ಭಾಗ 2 ನ್ನು ಶಶಾಂಕ್ ಅವರು ನಿರ್ದೇಶಿಸುತ್ತಿದ್ದಾರೆ.ಈಕೆ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ಗಂಗಾಧರ್ ಅವರು ಅವರು ನಿರ್ಮಾಣ ಮಾಡುತ್ತಿದ್ದಾರೆ.ಈ ಚಿತ್ರವನ್ನು ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಲಾಂಚ್ ಮಾಡುವ ಸಾಧ್ಯತೆ ಇದೆ. ಗಣೇಶ್ ಮತ್ತು ಶಶಾಂಕ್ ಅವರು ಬ್ಯುಸಿ ಇರುವುದರಿಂದ ಈ ನಿರ್ಧಾರ ಕೈಗೊಂಡಿದ್ದಾರಂತೆ. ಅಂತೂ ಈ ಮುಂಗಾರು ಮಳೆ ಮತ್ತೆ ಸುರಿಯೋಕೆ ಸಿದ್ಧವಾಗಿದೆ..

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments