Select Your Language

Notifications

webdunia
webdunia
webdunia
webdunia

ಕೃಷ್ಣವಂಶಿ ನಿರ್ದೇಶನದ ಚಿತ್ರಕ್ಕೆ ಪ್ರಕಾಶ್ ರಾಜ್ ಹಣ ಹೂಡ್ತಾ ಇದ್ದಾರಂತೆ

ಕೃಷ್ಣವಂಶಿ ನಿರ್ದೇಶನದ ಚಿತ್ರಕ್ಕೆ ಪ್ರಕಾಶ್ ರಾಜ್ ಹಣ ಹೂಡ್ತಾ ಇದ್ದಾರಂತೆ
ಬೆಂಗಳೂರು , ಶುಕ್ರವಾರ, 21 ನವೆಂಬರ್ 2014 (12:14 IST)
ಒಗ್ಗರಣೆ ಚಿತ್ರವನ್ನು ಪ್ರಕಾಶ್ ರಾಜ್ ಅವರು ಕನ್ನಡ ತಮಿಳು, ತೆಲುಗು ಭಾಷೆಗಳಲ್ಲಿ ನಿರ್ದೇಶಿಸಿದರು. ಆದರೆ ಆ ಚಿತ್ರ ಕನ್ನಡದಲ್ಲಿ ಮಾತ್ರ ಯಶಸ್ಸು ಪಡೆಯಿತು. ಇತರ ಭಾಷೆಗಳಲ್ಲಿ   ಗೆಲ್ಲಲಿಲ್ಲ. ಈಗ ಪ್ರಕಾಶ್ ಅವರು ಹೊಸ ಚಿತ್ರದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ ಬದಲಿಗೆ ನಿರ್ಮಾಣ  ಮಾಡಲು ಸಿದ್ಧತೆ ನಡೆಸಿದ್ದಾರೆ. 
 
ಈ ಚಿತ್ರವನ್ನು ಒಂದು ಕಾಲದಲ್ಲಿ ಕನ್ನಡ ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ  ನಟಿಸಿದ್ದ ತಾರೆ ರಮ್ಯ ಕೃಷ್ಣ ಅವರ ಪತಿ ಕೃಷ್ಣ ವಂಶಿ ಅವರ ನಿರ್ದೇಶನದಲ್ಲಿ ತಯಾರುತ್ತದೆಯಂತೆ. 
 
ಈ ಸಿನಿಮಾ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ ಪ್ರಕಾಶ್. ಕೃಷ್ಣವಂಶಿ ಅವರಿಗೆ ಪ್ರಕಾಶ್ ರಾಜ್ ಕಂಡ್ರೆ ಅಭಿಮಾನ. ಆಚಿತ್ರಗಳಲ್ಲಿ ಪ್ರಕಾಶ್ ರಾಜ್ ಅವರ ಪಾತ್ರ ಪ್ರಮುಖವಾದ ಮಹತ್ವ ಪಡೆದಿರುತ್ತದೆ . ಈ ಎಲ್ಲ ಕಾರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರಕಾಶ್ ರಾಜ್ ಅವಕಾಶ ನೀಡಿದ್ದಾರೆ.ಚಿತ್ರ ಕೌಟುಂಬಿಕ ಕಥಾಹಂದರ ಹೊಂದಿರುತ್ತದೆ ಎನ್ನುವುದೇ ಈಗ ಹರಡಿರುವ  ಸುದ್ದಿ.

Share this Story:

Follow Webdunia kannada