Select Your Language

Notifications

webdunia
webdunia
webdunia
webdunia

ಕನ್ನಡದ ಚಾಕೊಲೇಟ್ ಹೀರೋ ಕೃಷ್ಣ ಅಜಯ್ ರಾವ್ ಗೆ ಈಗ ರಮ್ಯ ಚೈತ್ರ ಕಾಲ

ಕನ್ನಡದ   ಚಾಕೊಲೇಟ್ ಹೀರೋ ಕೃಷ್ಣ ಅಜಯ್ ರಾವ್ ಗೆ ಈಗ ರಮ್ಯ ಚೈತ್ರ ಕಾಲ
ಬೆಂಗಳೂರು , ಗುರುವಾರ, 20 ನವೆಂಬರ್ 2014 (11:15 IST)
ಹೆಸರು ಬದಲಾವಣೆ ಮಾಡಿಕೊಳ್ಳುವ ಪರಿಪಾಟ ಕೇವಲ ರಾಜಕೀಯ ನಾಯಕರಿಗೆ ಮಾತ್ರವಲ್ಲ ಸಿನಿ ಮಂದಿಗೂ ಸಹಿತ ಇದೆ. ಆರಂಭದಲ್ಲಿ ಒಂದು ಹೆಸರಿದ್ದು, ಆ ಬಳಿಕ ಅದು ಬದಲಾಗಿ, ಕೊನೆಗೆ ಅದೇ ಹೆಸರಿಗೆ ಬರುವ ಅಥವಾ ಅದೃಷ್ಟಕ್ಕಾಗಿ ಹುಡುಕಾಡುತ್ತಾ ಮತ್ತೊಂದು ಹೆಸರನ್ನು ತಮ್ಮ ಹೆಸರೊಂದಿಗೆ ಜೋಡಿಸಿಕೊಳ್ಳುವ ಪದ್ಧತಿ ಇದ್ದೇ ಇದೆ. ಅದರಲ್ಲಿ ಈಗ ಅಜಯ್ ರಾವ್ ಸಹ ಸೇರಿದ್ದಾರೆ. ಕನ್ನಡ ಚಿತ್ರರಂಗದ ಚಾಕೋಲೆಟ್ ಹೀರೋ ಅಜಯ್ ರಾವ್ ಅವರು ರೋಸ್  ಚಿತ್ರದಲ್ಲಿ ತಮ್ಮ ಹೆಸರನ್ನು ಕೃಷ್ಣ ಅಜಯ್ ರಾವ್ ಎಂದು ಬದಲಾಯಿಸಿಕೊಂಡ ಬಳಿಕ ಅದೃಷ್ಟ ಬದಲಾಗಿದೆ. ಅವರ ಕೈಲಿ ಅನೇಕ ಅವಕಾಶಗಳಿವೆ. ಅಲ್ಲದೆ ನಟನೆಯ ಚಿತ್ರಗಳಿಗೆ ಜೀವದಾನ ಮಾಡಿದೆ. ಅವುಗಳು ಈಗ ಬಿಡುಗಡೆಯತ್ತ ಇದೆ. 
 
ರಾಧಿಕ ಪಂಡಿತ್ ಅವರ ಜೊತೆ ಎಂದೆಂದಿಗೂ ಎನ್ನುವ ಚಿತ್ರದಲ್ಲಿ ನಟಿಸಿದ್ದರು. ಅದು ಬಹುತೇಕ ಚಿತ್ರೀಕರಣ ವಿದೇಶದಲ್ಲಿ  ಮಾಡಲಾಗಿತ್ತು. ಆದರೆ ಕಾರಣಾಂತರಗಳಿಂದ ಜನರ ಮುಂದೆ ಬಂದಿರಲಿಲ್ಲ.ಈ ಚಿತ್ರವನ್ನು ಎಸ್ವಿ ಪ್ರೊಡಕ್ಷನ್ ಅಡಿಯಲ್ಲಿ ತಯಾರು ಮಾಡಲಾಗಿದೆ. ಇಮ್ರಾನ್ ಸರ್ದಾರಿಯ ಅವರ ಮೊಟ್ಟಮೊದಲ ನಿರ್ದೇಶನದ ಚಿತ್ರ ಇದಾಗಿದೆ. 
 
ಜೈ ಬಜರಂಗ ಬಲಿ ಚಿತ್ರದಲ್ಲಿ ಸಿಂಧು ಲೋಕ ನಾಥ್ ಜೊತೆ ನಟಿಸಿದ್ದು ಆ ಚಿತ್ರದ ಅಂತಿಮ ಹಂತದ ಕಾರ್ಯ ಈಗ ನಡೆಯುತ್ತಿದೆ. ಅಲ್ಲದೆ ಸೆಕೆಂಡ್ ಹ್ಯಾಂಡ್   ಹೀರೋ ಎನ್ನುವ ಚಿತ್ರ ಈಗಾಗಲೇ ಕೆಲಸ ಮುಗಿಸಿದೆ, ಇನ್ನು ಹೋಂ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಕೃಷ್ಣ ಲೀಲಾ ಚಿತ್ರದ ಮಾತಿನ ಭಾಗ ಮತ್ತು ಹಾಡುಗಳ ಕೆಲಸ ಪೂರ್ಣವಾಗಿದೆ. 
 
ಇವೆಲ್ಲದರ ನಡುವೆ ಸಂಪೂರ್ಣವಾಗಿ ಸಿದ್ಧವಾಗಿ ಬಿಡುಗಡೆಗೆ ಕಾಯುತ್ತಿರುವ ಚಿತ್ರ ಕೃಷ್ಣ  s / o ಸಿಎಮ್. ಕೃಷ್ಣ ಅಜಯ್ ರಾವ್ ಅವರ ಚಿತ್ರಗಳು ಗೆಲುವನ್ನು ಕಾಣಲಿ ಎನ್ನುವ ಹಾರೈಕೆ ನಮ್ಮದು.
 

Share this Story:

Follow Webdunia kannada