Webdunia - Bharat's app for daily news and videos

Install App

ಒಡೆದ ಸಂಸಾರ ಒಂದಾಯ್ತು.. ದೂರವಾಯ್ತು ವಿಜಿ ನಾಗರತ್ನ ವೈಮನಸ್ಯ

Webdunia
ಗುರುವಾರ, 20 ನವೆಂಬರ್ 2014 (11:07 IST)
ಅಂತೂ ಇಂತೂ ಒಡೆದ ಬದುಕು ಒಂದಾಯಿತು. ಚಿದ್ರವಾಗಲು ಹೊರಟಿದ್ದ ದಾಂಪತ್ಯ ಒಗ್ಗೂಡಿತು. ದುನಿಯಾ ವಿಜಯ್ ಮತ್ತು ನಾಗರತ್ನ ದಂಪತಿಗಳು ಒಂದಾದರು. ವಿಚ್ಛೇದನ ಎನ್ನುವ ಮಹಾಮಾರಿ ಅವರ ಬದುಕಿನಿಂದ ತೊಲಗಿ ಹೋಯ್ತು. ನಟ ದುನಿಯಾ ವಿಜಯ್ ಸಂಸಾರದಲ್ಲಿ  ಅದ್ಯಾವ ಕಾರಣಕ್ಕೋ ಏನೋ  ಬಿರುಕು ಮೂಡಿತ್ತು. ಇದರಿಂದ ಆ ದಾಂಪತ್ಯ ವಿಚ್ಛೇದನದವರೆಗೂ ನಡೆದಿತ್ತು.
 
 ಆ ದಂಪತಿಗಳು ಮತ್ತೆ ಒಂದಾಗುವ ಮನಸ್ಸು ಮಾಡಿದ್ದಾರೆ. ಮಕ್ಕಳಿಗೆ ಒಳ್ಳೆಯ ಬದುಕು ನೀಡಲು ಸಿದ್ಧವಾಗಿದ್ದಾರೆ. ಪತ್ನಿ ನಾಗರತ್ನ ಅವರಿಗೆ ವಿಚ್ಛೇದನ ನೀಡಲು ದುನಿಯಾ ವಿಜಯ್ ಬಯಸಿದ್ದರು. ಅದಕ್ಕೆ ಪೂರಕವಾಗಿ ಎರಡು ಕಡೆ ವಾದ ವಿವಾದಗಳು ನಡೆದು ಅಂತಿಮವಾಗಿ ಸುಖಾಂತ್ಯ ಕಂಡಿದೆ. 
ಎರಡು ಕಡೆಯವರ ವಾದ ವಿವಾದಗಳನ್ನು ಆಲಿಸಿದ ಕೆ.ಎಸ್ ಶ್ರೀನಿವಾಸ್ ಈ ಜೋಡಿಯ ಮನಸ್ತಾಪ ದೂರ ಮಾಡಿ ಸಂಸಾರ ನಡೆಸಲು ಸಹಾಯ ಮಾಡಿದ್ದಾರೆ.  
 
ಅಷ್ಟೇ ಅಲ್ಲದೆ ವಿಚ್ಛೇದನ ಪ್ರಕರಣಗಳನ್ನು ಹಿಂಪಡೆಯುವಂತೆ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಒಡೆದ ಸಂಸಾರ ಒಂದಾಗಿದೆ. ಚಿತ್ರಬದುಕಲ್ಲಿ ತನಗೊಂದು ಸ್ಥಾನ ಪಡೆಯ ಸಾಕಷ್ಟು ಪ್ರಯತ್ನ ಪಟ್ಟಿದ್ದ ವಿಜಯ್ ಅವರಿಗೆ ದುನಿಯಾ ಚಿತ್ರ ಕೈ ಹಿಡಿಯಿತು. ಅದಾದ ಬಳಿಕ ಅವರು ನಿರ್ದೇಶಕರ ನಟರಾಗಿ ಬೆಳೆದರು. ಆದರೆ ಅದ್ಯಾವ ಕೆಟ್ಟ ಗಳಿಗೆಯೋ ವಿಜಯ್ ಅವರ ವೈವಾಹಿಕ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಿತು . ಈಗ ಎಲ್ಲ ಸರಿಯಾಗಿದೆ. ಈ ಜೋಡಿ ಒಂದಾಗಿದ್ದಾರೆ. ಅವರ ಬದುಕು ಸುಖಕರ ಆಗಿರಲಿ ಎನ್ನುವ ಹಾರೈಕೆ ವೆಬ್ ದುನಿಯಾ ಪತ್ರಿಕೆಯದ್ದಾಗಿದೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments