Select Your Language

Notifications

webdunia
webdunia
webdunia
webdunia

ಚಿರಂಜೀವಿ ಸರ್ಜ ಸೀಜರ್ ಆಗ್ತಾ ಇದ್ದಾರೆ.. ಈ ಸೀಜರ್ ಆ ಸೀಜರ್ ಅಲ್ಲ .. ಅಲ್ಲವೇ ಅಲ್ಲ !

ಚಿರಂಜೀವಿ ಸರ್ಜ ಸೀಜರ್ ಆಗ್ತಾ ಇದ್ದಾರೆ.. ಈ ಸೀಜರ್ ಆ ಸೀಜರ್ ಅಲ್ಲ .. ಅಲ್ಲವೇ  ಅಲ್ಲ !
ಬೆಂಗಳೂರು , ಗುರುವಾರ, 23 ಅಕ್ಟೋಬರ್ 2014 (12:41 IST)
ಕನ್ನಡ ಚಿತ್ರರಂಗದ ಯುವ ಸಾಮ್ರಾಟ್ ಎನ್ನುವ ಬಿರುದು ದೊರೆತಿರುವುದು ಚಿರಂಜೀವಿ ಸರ್ಜಾಗೆ. ಕನ್ನಡ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ನಟಿಸಿದ್ದರು ಸಹಿತ ಎಲ್ಲರ ಗಮನ ಸೆಳೆದಿರುವ ನಟ ಈತ. ಈಗ ಚಿರು  ರಾಜಾಹುಲಿ ಫೇಮ್ ನಿರ್ದೇಶಕ ಗುರು ದೇಶಪಾಂಡೆ ಅವರ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಹೆಸರು ರುದ್ರ ತಾಂಡವ. ಅದಲ್ಲದೆ ಇತ್ತೀಚೆಗೆ ಚಿರು ಹುಟ್ಟಿದ ಹಬ್ಬ ನಡೆಯಿತು. ಅಂದು ಸಹ ಅವರು ತಮ್ಮ ಹೊಸ ಚಿತ್ರಕ್ಕೆ ಸಹಿ ಹಾಕಿದರು.
 
ಚಿರು ನಟಿಸುತ್ತಿರುವ ಹೊಚ್ಚ ಹೊಸ ಚಿತ್ರದ ಹೆಸರು ಸೀಜರ್ . ಇದು ಜೂಲಿಯಸ್ ಸೀಜರ್ ಕಥೆಯನ್ನು ಹೊಂದಿಲ್ಲ. ಸಂಪೂರ್ಣವಾಗಿ ಬೇರೆ ಕಥೆಯನ್ನು ಒಳಗೊಂಡ ಚಿತ್ರವಾಗಿದೆ. ಶ್ರೀ ಕದ್ರಿ ಲಕ್ಷ್ಮಿ ನರಸಿಂಹ ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಚಿತ್ರವನ್ನು ವಿನಯ್ ಕೃಷ್ಣ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ ನಿರ್ಮಾಪಕ ವಿನಯ್ ಕೃಷ್ಣ.

ಅಂದ್ರೆ ನಿರ್ಮಾಣ ಮತ್ತು ನಿರ್ದೇಶನ ಎರಡು ಸಹ ವಿನಯ್ ಅವರೇ ಮಾಡುತ್ತಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಅವರು ಸಂಗೀತ ನಿರ್ದೇಶಕರಾಗಿದ್ದಾರೆ.ಛಾಯಾಗ್ರಹಣದ ಹೊಣೆಯನ್ನು ವಿಶ್ವೇಶ್ ಶಿವ ಅವರು ಹೊತ್ತಿದ್ದಾರೆ.  ಇದು ಸಾಹಸ ಪ್ರಧಾನ ಚಿತ್ರ ಎಂದು ಚಿತ್ರತಂಡ ತಿಳಿಸಿದೆ. ಸಾಹಸಪ್ರಿಯರಿಗೆ ಮತ್ತೊಂದು  ಆಕ್ಷನ್ ಚಿತ್ರ ಸಧ್ಯದಲ್ಲೇ ಸಿಗಲಿದೆ. 

Share this Story:

Follow Webdunia kannada