Select Your Language

Notifications

webdunia
webdunia
webdunia
webdunia

ಸರಳ ಹುಟ್ಟುಹಬ್ಬದ ಆಚರಣೆಯತ್ತ ಪರಿಣಿತಿ ಚಿತ್ತ.. ಕಾರಣ ಏನು ಗೊತ್ತ ?

ಸರಳ ಹುಟ್ಟುಹಬ್ಬದ ಆಚರಣೆಯತ್ತ ಪರಿಣಿತಿ ಚಿತ್ತ.. ಕಾರಣ ಏನು ಗೊತ್ತ ?
ಬೆಂಗಳೂರು , ಗುರುವಾರ, 23 ಅಕ್ಟೋಬರ್ 2014 (12:02 IST)
ನನ್ನನ್ನು ಪ್ರೀತಿಸುವವರ ಬಗ್ಗೆ ಸದಾ ನಾನು ಆಸ್ಥೆ ನೀಡುತ್ತೇನೆ. ಅವರು ಯಾರು ಬೇಕಾದರೂ ಆಗಬಹುದು . ಸಿನಿಮಾ ಮಂದಿ ಆಗಿರ ಬಹುದು ಅಥವಾ ಬೇರೆ ಯಾರೇ ಆಗಿರ ಬಹುದು ಎಂದು ಪರಿಣಿತಿ ಚೋಪ್ರ ಹೇಳಿದ್ದಾಳೆ. ಆದರೆ ತಾನು ಎಂದಿಗೂ ಲವ್ ಅಫೇರ್ ಗೆ ಆದ್ಯತೆ ನೀಡಲ್ಲ ಎನ್ನುವ ಮಾತನ್ನು ಸಹ ಹೇಳಿದ್ದಾಳೆ. 
 
ಅಕ್ಟೋಬರ್ 26ರಂದು ಪರಿಣಿತಿ ಹುಟ್ಟು ಹಬ್ಬ. ಅಂದು ಆಕೆ ಅದ್ಧೂರಿಯ ಹುಟ್ಟುಹಬ್ಬ ಮಾಡಿಕೊಳ್ಳುತ್ತಿಲ್ಲವಂತೆ. ಅದಕ್ಕೆ ಮುಖ್ಯ ಕಾರಣ ತನ್ನ ಅಣ್ಣನ ಅನಾರೋಗ್ಯ. ಆದಕಾರಣ ಮನೆಯ ಎಲ್ಲ ಸದಸ್ಯರನ್ನು ಭೇಟಿ ಮಾಡ್ತೇನೆ ವಿನಃ ಹುಟ್ಟುಹಬ್ಬ ಆಚರಿಸಿಕೊಳ್ಳೋಲ್ಲ ಎಂದು ಹೇಳಿದ್ದಾಳೆ ಈ ಭಾಮೆ.
 
ಕಿಲ್ ದಿಲ್ ಹಾಡಿನ ಚಿತ್ರೀಕರಣ ಆದ ಬಳಿಕ ತನ್ನ ತಾಯಿತಂದೆ , ಅಣ್ಣನನ್ನು ಭೇಟಿ ಮಾಡಿ ಅವರೊಂದಿಗೆ ಸಮಯ ಕಳೆಯುವುದಾಗಿ ಆಕೆ ಹೇಳಿದ್ದಾಳೆ. ಕೆಲವು ತಿಂಗಳುಗಳ ಹಿಂದೆ ಆಕೆ ಜಾಗ್ವಾರ್ ಕಾರನ್ನು ಕೊಂಡಿದ್ದಳು. ಅದನ್ನು ತನ್ನ ಪೋಷಕರಿಗೆಂದು ಕೊಂಡಿದ್ದಾಗಿ ಹೇಳಿದ್ದಾಳೆ. ಈಗ ಮನೆಯನ್ನು ಕೊಳ್ಳುವುದಷ್ಟೆ ಉಳಿದಿರುವ ಕೆಲಸ ಎಂದು ಹೇಳಿದ್ದಾಳೆ . ತನ್ನ  ಹುಟ್ಟು ಹಬ್ಬದ ದಿನವನ್ನು ನನ್ನ ಸ್ನೇಹಿತರು ಮರೆತರೆ ತುಂಬಾ ದುಃಖ ಆಗುತ್ತದೆ ಎಂದು ಹೇಳಿರುವ ಪರಿಣಿತಿ ಸರ್ವೇ ಜನೋ ಸುಖಿನೋ ಭವಂತು ಎಂದು ಎಲ್ಲರು ಸುಖವಾಗಿರಲಿ ಎನ್ನುವ ಆಶಯ ತನ್ನದು ಎಂದು ಹೇಳಿದ್ದಾಳೆ. 

Share this Story:

Follow Webdunia kannada