Select Your Language

Notifications

webdunia
webdunia
webdunia
webdunia

ನಾನು ಬದಲಾಯಿಸಲ್ಲ ಬಸವಣ್ಣ ಶೀರ್ಷಿಕೆ ..ನಾನು ಬದಲಾಯಿಸಲ್ಲ !!

ನಾನು ಬದಲಾಯಿಸಲ್ಲ ಬಸವಣ್ಣ ಶೀರ್ಷಿಕೆ ..ನಾನು ಬದಲಾಯಿಸಲ್ಲ !!
ಬೆಂಗಳೂರು , ಮಂಗಳವಾರ, 30 ಸೆಪ್ಟಂಬರ್ 2014 (10:50 IST)
ಬಹು ವಿವಾದಿತ ಚಿತ್ರ ಶೀರ್ಷಿಕೆ ಗಳಲ್ಲಿ ಬಸವಣ್ಣ ಸಹಿತ ಒಂದು.  ದಂಡುಪಾಳ್ಯ ಸಿನೆಮಾ ಮಾಡಿ ಗೆದ್ದ  ನಿರ್ದೇಶಕ ಶ್ರೀನಿವಾಸ ರಾಜು ಈಗ ಬಸವಣ್ಣನ ಕಡೆಗೆ ತಮ್ಮ ಚಿತ್ತ ನೆಟ್ಟಿದ್ದಾರೆ. ಚಿತ್ರದ ಶೀರ್ಷಿಕೆ ಬಸವಣ್ಣ ಅಂತಲೇ ಇರುತ್ತದೆ. ಏಕೆಂದರೆ ಚಿತ್ರದ ಕಥಾ ನಾಯಕ ಸಹ ಬಸವಣ್ಣ ಹೆಸರಿನವನು.ಅದಕ್ಕಾಗಿ ನಾನು ಬದಲಾಯಿಸಲ್ಲ ಎಂದು ಹೇಳಿದ್ದಾರೆ. ಆದರು ಎಲ್ಲರ ಒತ್ತಾಯದಿಂದ ನಾನು  ಸಿಂಬಲ್ ಇರುವ ಶೀರ್ಷಿಕೆಯನ್ನು ಬಿಡುಗಡೆ ಮಾಡುತ್ತಿದ್ದೇನೆ. ಈ ಶೀರ್ಷಿಕೆ ಬಗ್ಗೆ ಮಂದಿ ಅದ್ಯಾಕೆ ಇಷ್ಟು ಬೇಜಾರಾಗಿದ್ದಾರೆ ಎನ್ನುವ ಮಾತು ನೊಂದುಕೊಂಡು ಹೇಳಿದ್ದಾರೆ ನಿರ್ದೇಶಕ ಶ್ರೀನಿವಾಸ ರಾಜು. 
 
ಸಿನೆಮಾ ಧರ್ಮ ಹಾಗೂ ಅಂಡರ್ ವರ್ಲ್ಡ್ ಬಗ್ಗೆ  ಇದ್ದರು ಸಹ ಇದು ಕಾಲ್ಪನಿಕ ಕಥೆ ಯಾಗಿದ್ದು, ಯಾರ ಭಾವನೆಗಳಿಗೆ ಧಕ್ಕೆ ತರುವಂತೆ ಇಲ್ಲ ಎಂದು ಹೇಳಿದ್ದಾರೆ ಶಿವನ ದೇವಸ್ಥಾನದ ಮುಂದೆ ಇರುವ ಬಸವ ನಾಗಿ  ಸೂಪರ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದಾರೆ. . ತೆಲುಗು ರೆಂಜ್ ಅಲ್ಲಿ ಸೊಗಸಾಗಿ ಬಂದಿದ್ದು,  ನಿರ್ಮಾಪಕ ಸಿ ಆರ್ ಮನೋಹರ್ ಅವರು ದೊಡ್ಡ ಮಟ್ಟದಲ್ಲಿ ಸಿನೆಮಾ ಮಾಡಿದ್ದಾರೆ ಎನ್ನುವ ಮೆಚ್ಚುಗೆ ಉಪೇಂದ್ರ ಅವರಿಂದ. ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮತ್ತು ಸಲೋನಿ ಉಪ್ಪಿ ಜೊತೆಯಾಗಿದ್ದಾರೆ. ಸಲೊನಿಗೆ ಉಪೇಂದ್ರ  ಅವರ ಜೊತೆ ಇದು ಮೂರನೇ ಚಿತ್ರ. ಈಗಾಗಲೇ ಬುದ್ಧಿವಂತ ಮತ್ತು ದುಬೈ ಬಾಬು ಚಿತ್ರಗಳಲ್ಲಿ ನಟಿಸಿದ್ದಾರೆ ಸಲೋನಿ. ಇದು ತನ್ವಿ ಫಿಲಂಸ್ ಪತಾಕೆಯದಿಯಲ್ಲಿ ಸಿದ್ಧ ಆಗಿದೆ. ಹೆಸರು ನೀಡಿದಷ್ಟು ಕಿಕ್ ಚಿತ್ರ ನೀಡುತ್ತಾ ಎನ್ನುವುದುಎ ಈಗ ಎಲ್ಲರ ಮನದಲ್ಲಿ ಉಳಿಸಿರುವ ಪ್ರಶ್ನೆ .

Share this Story:

Follow Webdunia kannada