ಚೇತನ್ ಕುಮಾರ್ ಗೀತ ರಚನೆಕಾರರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದರು . ಈಗ ಆ ಜಾಗದಿಂದ ಡೈರೆಕ್ಟರ್ ವೃತ್ತಿಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಅವರ ನಿರ್ದೇಶನದ ಚಿತ್ರ ಬಹದ್ದೂರ್. ಇದರಲ್ಲಿ ಕನ್ನಡದ ಮುದ್ದಾದ ನಟಿ ರಾಧಿಕಾ ಪಂಡಿತ್ ಮತ್ತು ನವನಟ ಧ್ರುವ ಸರ್ಜಾ ನಟಿಸುತ್ತಿದ್ದಾರೆ ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ಆಕ್ಷನ್ ಪ್ರಿನ್ಸ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸೆಸ್ ಎನ್ನುವ ಹೆಸರಿನಿಂದ ಕರೆಯುತ್ತಾರೆ.
ತಮ್ಮನ್ನು ತಮ್ಮ ಹೆಸರಿಂದಲೇ ಕರೆಯುತ್ತಿರುವ ಬಗ್ಗೆ ಇತ್ತೀಚಿಗೆ ಖುಷಿ ವ್ಯಕ್ತ ಪಡಿಸಿದರು. ಇತ್ತೀಚಿಗೆ ಈ ಜೋಡಿ ನಟನೆಯ ಬಹದ್ದೂರ್ ಚಿತ್ರದ ಟ್ರೇಲರ್ ಬಿಡುಗಡೆ ಆಯ್ತು. ಬಹದ್ದೂರ್ ನೈಜ ಘಟನೆಯನ್ನು ಆಧರಿಸಿದೆ ಎಂದು ತಿಳಿದು ಬಂದಿದೆ.
ಈ ಚಿತ್ರಕ್ಕೆಂದು ಧ್ರುವ ಸರ್ಜಾ 3 ತಿಂಗಳುಗಳ ಕಾಲ ಆಂಗಿಕ ಭಾಷೆಯ ಕಲಿಕೆಗೆ ಶಿಬಿರದಲ್ಲಿ ಭಾಗವಹಿಸಿದ್ದರಂತೆ.ಈ ಚಿತ್ರ ಯಾವುದೇ ನಿಯಮ ಅನುಸರಿಸದೆ ಇದ್ದರು ಸಹಿತ ನಿಶ್ಚಿತವಾಗಿ ಜನರನ್ನು ಆಕರ್ಷಿಸುವ ಅಂಶಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾಳೆ.