ಸ್ಯಾಂಡಲ್ ವುಡ್ ನ ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್. ನಿರ್ದೇಶಕರ ಮೆಚ್ಚಿನ ನಟ. ತಮ್ಮ ಕೆಲಸ ಮುಗಿಸಿ ಯಾರಿಗೂ ತೊಂದರೆ ನೀಡದೆ ಬಣ್ಣಕ್ಕೆ ನ್ಯಾಯ ಒದಗಿಸುವ ನಟ. ಇವರು ಇತ್ತೀಚೆಗೆ ಕನ್ನಡ ಮುದ್ದು ಸುಂದರಿ ರಾಧಿಕ ಪಂಡಿತ್ ಬಗ್ಗೆ ವಿಶೇಷವಾದ ಪ್ರೀತಿ ಹೊಂದಿದ್ದಾರೆ. ಆಕೆಯ ಸ್ವಭಾವ ಮನಕ್ಕೆ ಇಷ್ಟ ಆಗಿದ್ದು ರಾಧಿಕೆಯ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಈ ಜೋಡಿ ಕಡ್ಡಿಪುಡಿ ಚಿತ್ರದಲ್ಲಿ ನಟಿಸಿದ್ದರು. ಆಕೆಯ ನಟನೆಯ ಬಹದ್ದೂರ್ ಚಿತ್ರದಲ್ಲಿ ಮಾಡಿರುವ ಕಾರ್ಯವೈಖರಿಗೆ ಬೆರಗಾಗಿ ಶಿವಣ್ಣ ಇಂತಹ ಅಪರೂಪದ ಕಲಾವಿದೆಯನ್ನು ನಿಮ್ಮ ಚಿತ್ರಕ್ಕೆ ತೆಗೆದುಕೊಳ್ಳಿ ಎಂದು ಧೈರ್ಯವಾಗಿ ಯಾವುದೇ ನಿರ್ಮಾಪಕರಿಗೆ ಬೇಕಾದರೂ ಹೇಳ ಬಹುದು ಎಂದು ಹೇಳಿದ್ದಾರೆ ಶಿವಣ್ಣ. ಸ್ಥಳೀಯ ಭಾಷೆಯನ್ನೂ ಸ್ಪಷ್ಟ ಹಾಗೂ ಯಾವುದೇ ತೊಡಕಿಲ್ಲದೆ ಮಾತನಾಡುವ ಏಕೈಕ ನಟಿ ರಾಧಿಕ ಪಂಡಿತ್. ಅದ್ಧೂರಿ ಚಿತ್ರದ ಗೆಲುವಿಗೆ ರಾಧಿಕ ಶ್ರಮ ಎಂತಹದ್ದು ಎನ್ನುವುದು ಆ ಚಿತ್ರದ ಗೆಲುವಿನಿಂದ ತಿಳಿದು ಬಂದಿದೆ ಎಂದಿದ್ದಾರೆ.
ಅವರು ಪ್ರಾಯಶಃ ಮತ್ತೊಮ್ಮೆ ರಾಧಿಕ ಜೊತೆ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆ. ರಾಧಿಕ ಪಂಡಿತ್ ಕಾರ್ಯವೈಖರಿಯನ್ನು ಅಭಿನಂದಿಸಿದ್ದಾರೆ. ಈ ಯುವ ಕಲಾವಿದೆಯನ್ನು ಹೆಚ್ಚು ಪ್ರೋತ್ಸಾಹಿಸುತ್ತಿದ್ದಾರೆ. ಶಿವಣ್ಣನ ಇಂತಹ ಉದಾರತೆ ಅನುಕರಣೀಯ.
ರೀಲ್ ಮಾತ್ರವಲ್ಲ ರಿಯಲ್ ಲೈಫ್ ನಲ್ಲೂ ಸಹಿತ ಅಂಗಾಂಗ ಪ್ರದರ್ಶನ ಮಾಡುತ್ತಿದ್ದೀರಿ.ಯಾಕೆ ಈ ರೀತಿಯ ಆಷಾಢಭೂತಿ ವರ್ತನೆ?