Webdunia - Bharat's app for daily news and videos

Install App

ರಣತಂತ್ರ ಹಾಡಿಗೆ ತಲೆದೂಗಿದ ವಿಜಯ್ ರಾಘವೇಂದ್ರ

Webdunia
ಸೋಮವಾರ, 22 ಸೆಪ್ಟಂಬರ್ 2014 (11:28 IST)
ಅನೇಕ ಚಿತ್ರಗಳ ಮೂಲಕ ಕನ್ನಡ ಜನತೆಯನ್ನು ತಲುಪಿದ ನಟ ವಿಜಯ್ ರಾಘವೇಂದ್ರ. ಆದರೆ ಅದ್ಯಾಕೋ ಅವರ ಅದೃಷ್ಟ ಹೇಳಿಕೊಳ್ಳುವಂತೆ ಇರದ ಕಾರಣ ಒಂದರ್ಥದಲ್ಲಿ ಫ್ಲಾಪ್ ಹೀರೋ ಆದರು. ಅದಾದ ಬಳಿಕ ಅವರಿಗೆ ಜೀವ ನೀಡಿದ್ದು  ಬಿಗ್ ಬಾಸ್. ಅಲ್ಲಿ ಗೆದ್ದ ಬಳಿಕ  ವಿಜಯ ರಾಘವೇಂದ್ರ  ಮತ್ತು  ಹರಿಪ್ರಿಯಾ  ಕಾಂಬಿನೇಶನ್ ನಲ್ಲಿ ರಣತಂತ್ರ ಸೆಟ್ಟೇರಿತು. ಅದು ಈಗ ಹಿನ್ನೆಲೆ ಸಂಗೀತದ ತನಕ ತನ್ನ ಕಾರ್ಯ ಮುಂದುವರೆಸಿದೆ. ಮೌನವಾಗಿ ಕೆಲಸ ಸಾಗಿಸುತ್ತಿರುವ ರಣತಂತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ತಂತ್ರಗಾರಿಕೆ ಮಾಡಿದ್ದಾರೆ ಚಿತ್ರತಂಡ.ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣವಾಗಿದೆ  ರಣತಂತ್ರ. ಇದರ  ಹಿನ್ನೆಲೆ ಸಂಗೀತ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಾಗುತ್ತಿದೆ. 
 
ಆದಿರಾಂ ಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ ಹೊಣೆ ಹೊತ್ತಿದ್ದಾರೆ.ರಾಜೇಶ್ ಯಾದವ್  ಛಾಯಾಗ್ರಹಣ ಸಂಗೀತ  ಕಾರ್ತಿಕ್  ನೃತ್ಯಕಲೈ-ರಾಧಿಕಾ, ನಾಗೇಂದ್ರ ಪ್ರಸಾದ್, ಕಲ್ಯಾಣ್, ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. ಸುಂದರ ಮಧುರ ಲವ್ ಹಾಟ್ ಥ್ರಿಲ್ಲರ್ ಕಥಾ ಚಿತ್ರ ಹೊಂದಿದೆ ರಣತಂತ್ರ. ಚಿನ್ನಾರಿ ಮುತ್ತ ವಿಜಯ್  ಹಾಗೂ ಹರಿಪ್ರಿಯ ಜೊತೆಗೆ ಸತ್ಯಜಿತ್, ಭಜರಂಗಿ ಕುರಿ ರಂಗ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಗೋವಾ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಸಾಗುತ್ತಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments