Select Your Language

Notifications

webdunia
webdunia
webdunia
webdunia

ರಣತಂತ್ರ ಹಾಡಿಗೆ ತಲೆದೂಗಿದ ವಿಜಯ್ ರಾಘವೇಂದ್ರ

ರಣತಂತ್ರ ಹಾಡಿಗೆ  ತಲೆದೂಗಿದ  ವಿಜಯ್  ರಾಘವೇಂದ್ರ
ಬೆಂಗಳೂರು , ಸೋಮವಾರ, 22 ಸೆಪ್ಟಂಬರ್ 2014 (11:28 IST)
ಅನೇಕ ಚಿತ್ರಗಳ ಮೂಲಕ ಕನ್ನಡ ಜನತೆಯನ್ನು ತಲುಪಿದ ನಟ ವಿಜಯ್ ರಾಘವೇಂದ್ರ. ಆದರೆ ಅದ್ಯಾಕೋ ಅವರ ಅದೃಷ್ಟ ಹೇಳಿಕೊಳ್ಳುವಂತೆ ಇರದ ಕಾರಣ ಒಂದರ್ಥದಲ್ಲಿ ಫ್ಲಾಪ್ ಹೀರೋ ಆದರು. ಅದಾದ ಬಳಿಕ ಅವರಿಗೆ ಜೀವ ನೀಡಿದ್ದು  ಬಿಗ್ ಬಾಸ್. ಅಲ್ಲಿ ಗೆದ್ದ ಬಳಿಕ  ವಿಜಯ ರಾಘವೇಂದ್ರ  ಮತ್ತು  ಹರಿಪ್ರಿಯಾ  ಕಾಂಬಿನೇಶನ್ ನಲ್ಲಿ ರಣತಂತ್ರ ಸೆಟ್ಟೇರಿತು. ಅದು ಈಗ ಹಿನ್ನೆಲೆ ಸಂಗೀತದ ತನಕ ತನ್ನ ಕಾರ್ಯ ಮುಂದುವರೆಸಿದೆ. ಮೌನವಾಗಿ ಕೆಲಸ ಸಾಗಿಸುತ್ತಿರುವ ರಣತಂತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ತಂತ್ರಗಾರಿಕೆ ಮಾಡಿದ್ದಾರೆ ಚಿತ್ರತಂಡ.ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣವಾಗಿದೆ  ರಣತಂತ್ರ. ಇದರ  ಹಿನ್ನೆಲೆ ಸಂಗೀತ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಾಗುತ್ತಿದೆ. 
 
ಆದಿರಾಂ ಚಿತ್ರದ ಕಥೆ,ಚಿತ್ರಕಥೆ,ಸಂಭಾಷಣೆ ನಿರ್ದೇಶನ ಹೊಣೆ ಹೊತ್ತಿದ್ದಾರೆ.ರಾಜೇಶ್ ಯಾದವ್  ಛಾಯಾಗ್ರಹಣ ಸಂಗೀತ  ಕಾರ್ತಿಕ್  ನೃತ್ಯಕಲೈ-ರಾಧಿಕಾ, ನಾಗೇಂದ್ರ ಪ್ರಸಾದ್, ಕಲ್ಯಾಣ್, ಕವಿರಾಜ್ ಸಾಹಿತ್ಯ ಚಿತ್ರಕ್ಕಿದೆ. ಸುಂದರ ಮಧುರ ಲವ್ ಹಾಟ್ ಥ್ರಿಲ್ಲರ್ ಕಥಾ ಚಿತ್ರ ಹೊಂದಿದೆ ರಣತಂತ್ರ. ಚಿನ್ನಾರಿ ಮುತ್ತ ವಿಜಯ್  ಹಾಗೂ ಹರಿಪ್ರಿಯ ಜೊತೆಗೆ ಸತ್ಯಜಿತ್, ಭಜರಂಗಿ ಕುರಿ ರಂಗ ಮುಂತಾದವರು ನಟಿಸಿದ್ದಾರೆ. ಬೆಂಗಳೂರು, ಮೈಸೂರು, ಗೋವಾ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಸಾಗುತ್ತಿದೆ.

Share this Story:

Follow Webdunia kannada