Select Your Language

Notifications

webdunia
webdunia
webdunia
webdunia

ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಮನಂ ಈಗ ಆಸ್ಕರ್ ಕಡೆಗೆ ಪಯಣ

ಅಕ್ಕಿನೇನಿ  ನಾಗೇಶ್ವರ್ ರಾವ್ ಅವರ ಮನಂ ಈಗ ಆಸ್ಕರ್ ಕಡೆಗೆ ಪಯಣ
ಹೈದ್ರಾಬಾದ್ , ಶನಿವಾರ, 20 ಸೆಪ್ಟಂಬರ್ 2014 (10:39 IST)
ಈಗ ಮತ್ತೆ ವಿಶ್ವದೆಲ್ಲೆಡೆ ಆಸ್ಕರ್ ಹಬ್ಬ.  ಈ ವಿಶ್ವ ಸಿನಿಮಾ ಹಬ್ಬದಲ್ಲಿ ಭಾಗವಹಿಸಲು ಪ್ರಪಂಚದ ಎಲ್ಲ ಸಿನಿರಂಗದ ಸಿನಿಮಾಗಳು ಸಹಿತ ಕಾತುರದಿಂದ ಕಾಯುತ್ತಿರುತ್ತದೆ. ಅದರಲ್ಲಿ ಭಾರತ ದೇಶದ ಚಿತ್ರಗಳು ಸಹಿತ ಹೊರತಲ್ಲ. ಅನೇಕ ಕನ್ನಡ, ಹಿಂದಿ ಸೇರಿದಂತೆ ಭಾರತೀಯ ಭಾಷೆಗಳ  ಚಿತ್ರಗಳು ಸಹಿತ ಆ ಪ್ರತಿಷ್ಟಿತ ಸ್ಪರ್ಧೆಯ ಭಾಗವಾಗಿದೆ. ಈಗ ತೆಲುಗು ಮನಂ ಚಿತ್ರಕ್ಕೆ ಉತ್ತಮ ವಿದೇಶಿ ಚಿತ್ರದ ವಿಭಾಗಕ್ಕೆ ಆಹ್ವಾನ ಸಿಕ್ಕಿದೆ. ನಮ್ಮದೇಶದಲ್ಲಿ ಸ್ಪರ್ಧೆಗೆ ಕಳುಹಿಸಲು ಫಿಲಿಂ ಫೆಡರೇಶನ್ ಆಫ್ ಇಂಡಿಯಾ (ಎಫ್ ಎಫ್ ಐ) 30 ಭಾರತೀಯ  ಸಿನಿಮಾಗಳನ್ನು  ಸ್ಕ್ರೀನಿಂಗ್ ಮಾಡಿದ್ದು, ಆ ಚಿತ್ರಗಳಲ್ಲಿ ತೆಲುಗು ಮನಂ ಸಹಿತ ಸೇರ್ಪಡೆ ಆಗಿದೆ. ಅಕ್ಕಿನೇನಿ ನಾಗೇಶ್ವರ್ ರಾವ್ ಅವರ ಅಂತಿಮ ಚಿತ್ರ ಆಗಿರುವ ಮನಂ ಅವರ ಕುಟುಂಬ ಚಿತ್ರವಾಗಿದೆ. ಅದರಲ್ಲಿ ನಾಗಾರ್ಜುನ್, ನಾಗ ಚೈತನ್ಯ, ಅಖಿಲ್ ಸೇರಿದಂತೆ ಆ ಕುಟುಂಬ ಎಲ್ಲ ಸದಸ್ಯರು ತಮ್ಮ ಪ್ರತಿಭೆ ತೋರಿಸಿದ್ದರು.
 
ವಿಕ್ರಮ್ ಕುಮಾರ್ ನಿರ್ದೇಶನದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಕೌಟುಂಬಿಕ ಕಥಾ ಹಂದರ ಹೊಂದಿದ್ದು ಅಪಾರ ಸಂಖ್ಯೆಯ  ಪ್ರೇಕ್ಷಕರನ್ನು ಸೆಳೆದಿತ್ತು. ಈ ತಿಂಗಳ 23 ರಂದು ಇದು ಅಂತಿಮ ಸುತ್ತಿಗೆ ತಲಪುತ್ತದೆ.. ತೆಲುಗು ಪೀಪಲ್ ಸೇರಿದಂತೆ ಅನೇಕ ಭಾರತೀಯರನ್ನು ಆಕರ್ಷಿಸಿದ್ದ ಈ ಚಿತ್ರ ಆಸ್ಕರ್ ಮಂದಿಗೂ ಇಷ್ಟ ಆಗುತ್ತಾ ಅನ್ನೋದೇ ಈಗ ಟಾಲಿವುಡ್ ನಗರವಾಸಿಗಳ ಮನದಲ್ಲಿ ಕಾಡುತ್ತಿರುವ ಬಿಗ್ ಕ್ವಶ್ಚನ್. 
 

Share this Story:

Follow Webdunia kannada