Webdunia - Bharat's app for daily news and videos

Install App

ಕಲುಷಿತ ನೀರನ್ನು ಸೇವಿಸಿದ ಕಾರಣದಿಂದ ಇಂತಹ ಪರಿಸ್ಥಿತಿ ಎದುರಾಗಿದೆ ...

Webdunia
ಶುಕ್ರವಾರ, 19 ಸೆಪ್ಟಂಬರ್ 2014 (10:38 IST)
ನಟ-ನಿರ್ಮಾಪಕ ಕಮಲ್ ಹಾಸನ್ ಈಗ ಡಿಸ್ಚಾರ್ಜ್ ಆಗಿದ್ದಾರೆ ಆಸ್ಪತ್ರೆಯಿಂದ. ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಅಪೊಲೊ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.  ಅವರ ಆರೋಗ್ಯದಲ್ಲಿ ಮಂಗಳವಾರ ಅಚಾನಕ್ ಏರುಪೇರಾದ ಕಾರಣ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈಗ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಅವರನ್ನು ಬುಧವಾರ ಆಸ್ಪತ್ರೆಯವರು ತೆರೆವುಗೊಳಿಸಿದರು.ಅವರು ನಿನ್ನೆ ಅಂದರೆ ಗುರುವಾರ ಪುನಃ ಶೂಟಿಂಗ್ ನಲ್ಲಿ ಮಗ್ನರಾದರು. ಕಮಲ್ ಸಾರ್ ಅವರ ಆರೋಗ್ಯ ಸರಿಯಾಗಿದೆ. ಅವರು ಗುರುವಾರ ಶೂಟಿಂಗ್ ನಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು ಅವರ ಮ್ಯಾನೇಜರ್. ಅದಕ್ಕೆ ತಕ್ಕಂತೆ ಕಮಲ್ ಹಾಸನ್ ಗುರುವಾರದಿಂದ ಶೂಟಿಂಗ್ ನಲ್ಲಿ ಭಾಗವಹಿಸಿದರು. 
 
ಕೇರಳದಲ್ಲಿ ಇತ್ತೀಚಿಗೆ ಶೂಟಿಂಗ್ ಮಾಡಲಾಗುತ್ತಿದ್ದು, ತಾನು  ರಸ್ತೆ ಬದಿಯ ಡಾಬ ದಲ್ಲಿ  ಆಹಾರ ಸೇವಿಸಿದೆ. ಬಹುಶಃ ಕಲುಷಿತ ನೀರನ್ನು ಸೇವಿಸಿದ ಕಾರಣದಿಂದ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.  ಮಲೆಯಾಳಂ ಮಾತ್ರವಲ್ಲದೆ ಕನ್ನಡ , ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಚಿತ್ರವೆನ್ನುವ ಅಗ್ಗಳಿಕೆ ಪಡೆದ ದೃಶ್ಯಂ ಚಿತ್ರ ಈಗ ತಮಿಳಿನಲ್ಲಿ ಪಾಪನಾಸನಂ ಎನ್ನುವ ಹೆಸರಿನಿಂದ ತಯಾರಾಗುತ್ತಿದೆ. ಪಾಪನಾಸನಂ ಅಲ್ಲದೆ  ಕಮಲ್ ನಟನೆಯ ಉತ್ತಮ ವಿಲನ್ ಮತ್ತು ವಿಶ್ವರೂಪಂ ಈಗ ಬಿಡುಗಡೆಯ ಹಾದಿಯಲ್ಲಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments