Select Your Language

Notifications

webdunia
webdunia
webdunia
webdunia

ಕಲುಷಿತ ನೀರನ್ನು ಸೇವಿಸಿದ ಕಾರಣದಿಂದ ಇಂತಹ ಪರಿಸ್ಥಿತಿ ಎದುರಾಗಿದೆ ...

ಕಲುಷಿತ ನೀರನ್ನು ಸೇವಿಸಿದ ಕಾರಣದಿಂದ ಇಂತಹ ಪರಿಸ್ಥಿತಿ ಎದುರಾಗಿದೆ ...
ಚೆನ್ನೈ , ಶುಕ್ರವಾರ, 19 ಸೆಪ್ಟಂಬರ್ 2014 (10:38 IST)
ನಟ-ನಿರ್ಮಾಪಕ ಕಮಲ್ ಹಾಸನ್ ಈಗ ಡಿಸ್ಚಾರ್ಜ್ ಆಗಿದ್ದಾರೆ ಆಸ್ಪತ್ರೆಯಿಂದ. ಕಳೆದ ಎರಡು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾದ ಕಾರಣ ಅವರನ್ನು ಅಪೊಲೊ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು.  ಅವರ ಆರೋಗ್ಯದಲ್ಲಿ ಮಂಗಳವಾರ ಅಚಾನಕ್ ಏರುಪೇರಾದ ಕಾರಣ  ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಈಗ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಅವರನ್ನು ಬುಧವಾರ ಆಸ್ಪತ್ರೆಯವರು ತೆರೆವುಗೊಳಿಸಿದರು.ಅವರು ನಿನ್ನೆ ಅಂದರೆ ಗುರುವಾರ ಪುನಃ ಶೂಟಿಂಗ್ ನಲ್ಲಿ ಮಗ್ನರಾದರು. ಕಮಲ್ ಸಾರ್ ಅವರ ಆರೋಗ್ಯ ಸರಿಯಾಗಿದೆ. ಅವರು ಗುರುವಾರ ಶೂಟಿಂಗ್ ನಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು ಅವರ ಮ್ಯಾನೇಜರ್. ಅದಕ್ಕೆ ತಕ್ಕಂತೆ ಕಮಲ್ ಹಾಸನ್ ಗುರುವಾರದಿಂದ ಶೂಟಿಂಗ್ ನಲ್ಲಿ ಭಾಗವಹಿಸಿದರು. 
 
ಕೇರಳದಲ್ಲಿ ಇತ್ತೀಚಿಗೆ ಶೂಟಿಂಗ್ ಮಾಡಲಾಗುತ್ತಿದ್ದು, ತಾನು  ರಸ್ತೆ ಬದಿಯ ಡಾಬ ದಲ್ಲಿ  ಆಹಾರ ಸೇವಿಸಿದೆ. ಬಹುಶಃ ಕಲುಷಿತ ನೀರನ್ನು ಸೇವಿಸಿದ ಕಾರಣದಿಂದ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.  ಮಲೆಯಾಳಂ ಮಾತ್ರವಲ್ಲದೆ ಕನ್ನಡ , ತೆಲುಗಿನಲ್ಲಿ ಬ್ಲಾಕ್ ಬಸ್ಟರ್ ಚಿತ್ರವೆನ್ನುವ ಅಗ್ಗಳಿಕೆ ಪಡೆದ ದೃಶ್ಯಂ ಚಿತ್ರ ಈಗ ತಮಿಳಿನಲ್ಲಿ ಪಾಪನಾಸನಂ ಎನ್ನುವ ಹೆಸರಿನಿಂದ ತಯಾರಾಗುತ್ತಿದೆ. ಪಾಪನಾಸನಂ ಅಲ್ಲದೆ  ಕಮಲ್ ನಟನೆಯ ಉತ್ತಮ ವಿಲನ್ ಮತ್ತು ವಿಶ್ವರೂಪಂ ಈಗ ಬಿಡುಗಡೆಯ ಹಾದಿಯಲ್ಲಿದೆ. 

Share this Story:

Follow Webdunia kannada