Select Your Language

Notifications

webdunia
webdunia
webdunia
webdunia

ಕನ್ನಡ ವ್ಯೂಹ ತೆಲುಗು ಪಟ್ನಾಯಿಕ್‌ಗೆ ಮಾಡುತ್ತಾ ಜೀವದಾನ? ನೀಡುತ್ತ ತಿರುವು ?

ಕನ್ನಡ ವ್ಯೂಹ  ತೆಲುಗು ಪಟ್ನಾಯಿಕ್‌ಗೆ  ಮಾಡುತ್ತಾ ಜೀವದಾನ? ನೀಡುತ್ತ  ತಿರುವು ?
ಬೆಂಗಳೂರು , ಬುಧವಾರ, 17 ಸೆಪ್ಟಂಬರ್ 2014 (10:23 IST)
ಕನ್ನಡ , ತೆಲುಗು ಸೇರಿದಂತೆ ಅನೇಕ ಭಾಷೆಗಳಲ್ಲಿ ಸಂಗೀತ ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆದ ನಿರ್ದೇಶಕ- ಸಂಗೀತ ನಿರ್ದೇಶಕ ಆರ್ ಪಾಟ್ನಾಯಕ್. ಅವರ ಜಮಾನಾ ಹೇಗಿತ್ತು ಅಂದ್ರೆ ದಕ್ಷಿಣದಲ್ಲಿ ಇರೋದು ಒಬ್ಬರೇ  ಸಂಗೀತ ನಿರ್ದೇಶಕ ಅವರೇ ಆರ್ಪಿ ಎನ್ನುವಂತೆ. ಆದರೆ ಕಾಲ ಬದಲಾಗಿ ಅವರು ಗೆಲ್ಲುವ ಸಂಗತಿಯು ಸಹಿತ ಮರೀಚಿಕೆ ಆಗಲು  ಆರಂಭವಾಯ್ತು.  ಕ್ರಮೇಣ ಸಂಗೀತ ನಿರ್ದೇಶನದಲ್ಲಿ ಹೇಳಿಕೊಳ್ಳುವ ಹೆಸರು ಸಿಗದ ಕಾರಣ ತನ್ನ ಗಮನ ನಿರ್ದೇಶನದ ಕಡೆಗೆ ನೀಡಿದರು ಅಲ್ಲದೆ ನಟನೆ ಮೂಲಕವೂ ಸಹಿತ ತಮ್ಮನ್ನು ತಾವು ತೊಡಗಿಸಿಕೊಂಡರು. ಆರ್ಪಿ ಅವರ ನಟನೆಯ ಬ್ರೋಕರ್ ಚಿತ್ರ ಹೆಚ್ಚು ಜನಕ್ಕೆ ಇಷ್ಟವಾದರು ಸಹಿತ ಬಾಕ್ಸಾಫೀಸ್‌ಗೆ ಮಾತ್ರ ಅಷ್ಟೇನೂ ಇಷ್ಟ ಆಗದ ಕಾರಣ ಚಿತ್ರ ಸೋತು ಹೋಯ್ತು. 
 
ತೆಲುಗು ಪೀಪಲ್ ಅದ್ಯಾಕೋ ತನ್ನ ಕೈ ಹಿಡಿತಾ ಇಲ್ಲ ಎಂದು ಈಗ ಎಕ್ಸ್ ಕ್ಯೂಸ್ ಮಿ ಯಂತಹ ಚಿತ್ರಗಳನ್ನು ವೀಕ್ಷಿಸಿ  ಆತನಿಗೆ ಜೀವದಾನ ಮಾಡಿದ ಕನ್ನಡ ವೀಕ್ಷಕರ ಕಡೆಗೆ  ತಮ್ಮ  ಗಮನ ನೀಡಿದ್ದಾರೆ. ಅದರ ಪರಿಣಾಮ ವ್ಯೂಹ ಎನ್ನುವ ಹೆಸರಿನ ಕನ್ನಡ ಚಿತ್ರ ಸಿದ್ಧ ಮಾಡಿ ಅದರ ಕೆಲಸವನ್ನು ಆರಂಭಿಸಿದ್ದಾರೆ. ಇದು ಕನ್ನಡಿಗರಿಗೆ ಇಷ್ಟ ಆಗುವ ಕಥೆಯನ್ನು ಹೊಂದಿದೆ ಎನ್ನುವ ಮಾತನ್ನು ಹೇಳಿದ್ದಾರೆ ಪಾಟ್ನಾಯಕ್.
 
ಕಾಲಿವುಡ್ ನಲ್ಲಿ ಹೆಚ್ಚಿನ ಅವಕಾಶಗಳು ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ತನ್ನನ್ನು ಹೆಚ್ಚು ತೊಡಗಿಸಿಕೊಂಡಿರುವ ನಟಿ ಪ್ರಿಯಾಮಣಿ ಈ ಚಿತ್ರದಲ್ಲಿ ಹೀರೋಯಿನ್ ಆಗಿದ್ದಾಳೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ತನ್ನ ಅಭಿನಯ ತೋರುತ್ತಿರುವ ರಾಷ್ಟ್ರ ಪ್ರಶಸ್ತಿ , ನಂದಿ ಅವಾರ್ಡ್ ವಿಜೇತೆ  ಈಗ ತೆಲುಗು ಪಾಟ್ನಾಯಕ್ ಅವರಿಗೆ ಜೀವದಾನ ಮಾಡಲು ವ್ಯೂಹದ ಮೂಲಕ ಸಿದ್ಧ ಆಗಿದ್ದಾಳೆ.  ಕನ್ನಡದ ಪ್ರೇಕ್ಷಕರು ಆರ್ಪಿ ಗೆ ಜೀವದಾನ ಮಾಡಿದರೆ ಇನ್ನು ಒಂದಷ್ಟು ಆರ್ಪಿ ನಿರ್ದೇಶನದ  ಸಿನಿಮಾಗಳನ್ನು ಕನ್ನಡಿಗರು ನೋಡುವ ಅವಕಾಶ ಪಡೆಯುತ್ತಾರೆ. 

Share this Story:

Follow Webdunia kannada