Webdunia - Bharat's app for daily news and videos

Install App

ರಾಗಿಣಿ ರಣಚಂಡಿಯಾಗಿ ಖಳನಟ ಶರತ್ ಲೋಹಿತಾಶ್ವ ಬೆನ್ನಟ್ಟಿದ್ದಾರೆ

Webdunia
ಸೋಮವಾರ, 15 ಸೆಪ್ಟಂಬರ್ 2014 (10:31 IST)
ವೀರ ರಣಚಂಡಿ ಯಾಗಿ ರಾಗಿಣಿ ದ್ವಿವೇದಿ ಜನರ ಮುಂದೆ ಬರಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಆನಂದ್  ಪಿ ರಾಜು  ಅವರ ನಿರ್ದೇಶನದಲ್ಲಿ ನಲವತ್ತು ದಿನಗಳಿಂದ ಶೂಟಿಂಗ್ ನಡೆಯುತ್ತಿರುವ ಈ ಚಿತ್ರದಲ್ಲಿ ಸಾಹಸ ಭರಿತ ಪಾತ್ರದಲ್ಲಿ ನಟಿಸಿದ್ದಾರೆ ರಾಗಿಣಿ. ಈಕೆ ಈಗಾಗಲೇ ರಾಗಿಣಿ ಐಪಿಎಸ್ ಸಾಹಸ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಸಹ ಸಾಹಸಭರಿತ ಚಿತ್ರವಾಗಿದ್ದು ಇದರ ಕ್ಲೈಮಾಕ್ಸ್‌ನ್ನು ಇತ್ತೀಚಿಗೆ ಶೂಟ್ ಮಾಡಲಾಯಿತು. ಬೆಂಗಳೂರಿನ ಕಡಬಗೆರೆಯಲ್ಲಿ ಗೌಡರ ಮನೆಯಲ್ಲಿ ಈ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿ ಕೊಳ್ಳಲಾಯಿತು. 
 
ಈ ಚಿತ್ರ ರಾಗಿಣಿ ಐಪಿಎಸ್ ಚಿತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಸಾಹಸ ದೃಶ್ಯಗಳನ್ನು ಹೊಂದಿದೆಯಂತೆ. ಬಹುತೇಕ ಎಲ್ಲಾ ಹಿರಿಯ ನಟರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಪ್ರಿಯರಿಗೆ ರಣಚಂಡಿ ಸಾಕಷ್ಟು ಖುಷಿ ನೀಡುತ್ತಾಳೆ ಎಂದಿದೆ ಚಿತ್ರತಂಡ.
ಈ ಚಿತ್ರಕ್ಕೆ ಆರ್ ಗಿರಿ ಛಾಯಾಗ್ರಹಣವಿದೆ. ಶರತ್ ಲೋಹಿತಾಶ್ವ ಖಳನಟ ಪಾತ್ರಧಾರಿಯಾಗಿದ್ದಾರೆ. ರಮೇಶ್ ಭಟ್, ಪದ್ಮಜಾ ರಾವ್, ಶೋಭರಾಜ್ ನಟಿಸಿರುವ ಈ ಚಿತ್ರವನ್ನು ಕುಪ್ಪುಸ್ವಾಮಿ ನಿರ್ಮಾಣದಲ್ಲಿ ತಯಾರಿಸಲಾಗುತ್ತಿದೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments