Select Your Language

Notifications

webdunia
webdunia
webdunia
webdunia

ರಾಗಿಣಿ ರಣಚಂಡಿಯಾಗಿ ಖಳನಟ ಶರತ್ ಲೋಹಿತಾಶ್ವ ಬೆನ್ನಟ್ಟಿದ್ದಾರೆ

ರಾಗಿಣಿ  ರಣಚಂಡಿಯಾಗಿ  ಖಳನಟ ಶರತ್ ಲೋಹಿತಾಶ್ವ ಬೆನ್ನಟ್ಟಿದ್ದಾರೆ
ಬೆಂಗಳೂರು , ಸೋಮವಾರ, 15 ಸೆಪ್ಟಂಬರ್ 2014 (10:31 IST)
ವೀರ ರಣಚಂಡಿ ಯಾಗಿ ರಾಗಿಣಿ ದ್ವಿವೇದಿ ಜನರ ಮುಂದೆ ಬರಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಆನಂದ್  ಪಿ ರಾಜು  ಅವರ ನಿರ್ದೇಶನದಲ್ಲಿ ನಲವತ್ತು ದಿನಗಳಿಂದ ಶೂಟಿಂಗ್ ನಡೆಯುತ್ತಿರುವ ಈ ಚಿತ್ರದಲ್ಲಿ ಸಾಹಸ ಭರಿತ ಪಾತ್ರದಲ್ಲಿ ನಟಿಸಿದ್ದಾರೆ ರಾಗಿಣಿ. ಈಕೆ ಈಗಾಗಲೇ ರಾಗಿಣಿ ಐಪಿಎಸ್ ಸಾಹಸ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಇದು ಸಹ ಸಾಹಸಭರಿತ ಚಿತ್ರವಾಗಿದ್ದು ಇದರ ಕ್ಲೈಮಾಕ್ಸ್‌ನ್ನು ಇತ್ತೀಚಿಗೆ ಶೂಟ್ ಮಾಡಲಾಯಿತು. ಬೆಂಗಳೂರಿನ ಕಡಬಗೆರೆಯಲ್ಲಿ ಗೌಡರ ಮನೆಯಲ್ಲಿ ಈ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಿ ಕೊಳ್ಳಲಾಯಿತು. 
 
ಈ ಚಿತ್ರ ರಾಗಿಣಿ ಐಪಿಎಸ್ ಚಿತ್ರಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಸಾಹಸ ದೃಶ್ಯಗಳನ್ನು ಹೊಂದಿದೆಯಂತೆ. ಬಹುತೇಕ ಎಲ್ಲಾ ಹಿರಿಯ ನಟರು ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ. ಆಕ್ಷನ್ ಪ್ರಿಯರಿಗೆ ರಣಚಂಡಿ ಸಾಕಷ್ಟು ಖುಷಿ ನೀಡುತ್ತಾಳೆ ಎಂದಿದೆ ಚಿತ್ರತಂಡ.
ಈ ಚಿತ್ರಕ್ಕೆ ಆರ್ ಗಿರಿ ಛಾಯಾಗ್ರಹಣವಿದೆ. ಶರತ್ ಲೋಹಿತಾಶ್ವ ಖಳನಟ ಪಾತ್ರಧಾರಿಯಾಗಿದ್ದಾರೆ. ರಮೇಶ್ ಭಟ್, ಪದ್ಮಜಾ ರಾವ್, ಶೋಭರಾಜ್ ನಟಿಸಿರುವ ಈ ಚಿತ್ರವನ್ನು ಕುಪ್ಪುಸ್ವಾಮಿ ನಿರ್ಮಾಣದಲ್ಲಿ ತಯಾರಿಸಲಾಗುತ್ತಿದೆ. 
 

Share this Story:

Follow Webdunia kannada