Select Your Language

Notifications

webdunia
webdunia
webdunia
webdunia

ರೀಲ್ -ರಿಯಲ್ ಹೀರೋ ನಾಗಾರ್ಜುನ ಅವರ ಗಮನ ಅಂಗಾಂಗ ದಾನದತ್ತ ..

ರೀಲ್ -ರಿಯಲ್ ಹೀರೋ ನಾಗಾರ್ಜುನ ಅವರ  ಗಮನ ಅಂಗಾಂಗ ದಾನದತ್ತ ..
ಹೈದ್ರಾಬಾದ್ , ಬುಧವಾರ, 10 ಸೆಪ್ಟಂಬರ್ 2014 (11:42 IST)
ಅಕ್ಕಿನೇನಿ ನಾಗಾರ್ಜುನ ಅವರು ಅನೇಕ ರೀತಿಯ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಸದಾ ನಿಸ್ಸೀಮರು. ಅದೇ ರೀತಿ  ವೈಯಕ್ತಿಕ ಸಂಗತಿಗೆ ಬರುವುದಾದರೆ ಅವರು ಅನೇಕ ವ್ಯಾಪಾರಗಳಿಗೆ ಹಣ ಹೂಡುವುದರಲ್ಲಿಯೂ ಸಹಿತ ಸದಾ ಮುಂದೆ ಎಂದೇ ಹೇಳಬಹುದಾಗಿದೆ. ಆದರೆ ಇತ್ತೀಚೆಗೆ ಅವರ ಗಮನ ಸಮಾಜ ಸೇವೆಯ ಕಡೆಗೆ ಹೆಚ್ಚು ಹೆಚ್ಚು ಮಗ್ನವಾಗಿದೆ. ಅದಕ್ಕೆ ಆತನ ಪತ್ನಿ ಅಮಲ ಕಾರಣ ಆಗಿರಬಹುದು ಎನ್ನುತ್ತಿದ್ದಾರೆ ಟಾಲಿವುಡ್ ನಗರವಾಸಿಗಳು! 
 
ಮೀಲೋ ಇವರು ಕೋಟಿಶ್ವುರುಡು  ಕಾರ್ಯಕ್ರಮದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟ ನಾಗಾರ್ಜುನ. ಆ ಕಾರ್ಯಕ್ರಮದಲ್ಲಿ ಅನೇಕರ ಕಷ್ಟ ಆಲಿಸಿದ ನಾಗ್ ತನ್ನ ಆಲೋಚನಾ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ತನ್ನ ಬದುಕಲ್ಲಿ ಆಗಾಗ ಎದುರಾಗುವ ಕಷ್ಟಗಳನ್ನು ದೊಡ್ಡದು ಎಂದು ತಿಳಿದಿದ್ದೆ, ಆದರೆ ಅವರ ಮುಂದೆ ತನ್ನದೇನು ಕಷ್ಟಗಳೇ ಅಲ್ಲ ಎನ್ನುವ ನಾಗ್ ಅವರಿಗೆ ಈ ಸಂಗತಿ ತಡವಾಗಿ  ಮನದಟ್ಟಾಗಿದೆ.  ತನ್ನ ಪತ್ನಿ ಜೊತೆ ಸೇರಿ ಏಡ್ಸ್ ಬಗ್ಗೆ ಅರಿವನ್ನು ಮೂಡಿಸುವ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. 
 
ಈಗ ಸಮಾಜ ಸೇವೆಯಲ್ಲಿ ಮತ್ತೊಂದು ಅಡಿ ಮುಂದೆ ಇಟ್ಟಿದ್ದಾರೆ ನಾಗಾರ್ಜುನ. ಅಂಗಾಗ ದಾನ ಈಗ ಸ್ವಲ್ಪ ಹೆಚ್ಚೇ ಗಮನ ಸೆಳೆದಿರುವ ಸಮಾಜ ಸೇವೆ. ಇದಕ್ಕೆ ಸಂಬಂಧಪಟ್ಟಂತೆ ಅವರು ಅರಿವು ಮೂಡಿಸುವತ್ತ ಸಾಗಿದ್ದಾರೆ. ತನ್ನ ಮತ್ತು ತನ್ನ ಪತ್ನಿಯ ಅಂಗಾಂಗ ಮರಣದ ಬಳಿಕ ದಾನ ಮಾಡಬೇಕು ಎನ್ನುವ ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ನಾಗ್. ಇದೇ ತಿಂಗಳ 13  ರಂದು ಈ ಅಂಶದ ಅಡಿಯಲ್ಲಿ ಹೈದರಾಬಾದ್‌  ನಲ್ಲಿ ಅರಿವಿನ   ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ಅಭಿಮಾನಿಗಳನ್ನು ಆಹ್ವಾನಿಸಿ ಈ ಅಂಗಾಂಗ ದಾನದ ಬಗ್ಗೆ ವಿಸ್ತಾರವಾದ ಪ್ರಚಾರ ಮಾಡುವ ಉದ್ದೇಶ ಹೊಂದಿದ್ದಾರೆ ನಾಗಾರ್ಜುನ. ಒಟ್ಟಾರೆ ಸಿನಿಮಾದಲ್ಲಿ ಮಾತ್ರ ಮಾದರಿ ಆಗುವ ನಾಯಕರು ನಿಜ ಬದುಕಲ್ಲಿಯೂ ಮಾದರಿ ಆಗುತ್ತಿರುವ ಸಂಗತಿ ನಿಜಕ್ಕೂ ಹೆಮ್ಮೆಯ ವಿಷಯ ಆಗಿದೆ

Share this Story:

Follow Webdunia kannada