Webdunia - Bharat's app for daily news and videos

Install App

ಶ್ವೇತ ಬಸು ಪ್ರಸಾದ್ ಗೆ ಬಯಸದೆ ಬಂದ ಅವಕಾಶ

Webdunia
ಶನಿವಾರ, 6 ಸೆಪ್ಟಂಬರ್ 2014 (10:03 IST)
ಮಕಡಿ ಚಿತ್ರದ  ಬಾಲ ನಟಿ, ಅನೇಕ ಅವಾರ್ಡ್‌ಗಳನ್ನೂ ಪಡೆದಾಕೆ ಶ್ವೇತ ಬಸು ಪ್ರಸಾದ್ ವೇಶ್ಯಾವಾಟಿಕೆಯ ಕಾರಣದಿಂದ ಅರೆಸ್ಟ್ ಆಗಿದ್ದಾಳೆ. ಇಷ್ಟು ದಿನ ಆಕೆಗೆ ಇಂತಹ ಇಂದು ಸುಗ್ಗಿ ಕಾಲ ಇತ್ತೋ ಇಲ್ಲವೋ, ಆದರೆ ಈಗ ಒಳ್ಳೆಯ ಕಾಲ ಆರಂಭ ಆದಂತಿದೆ. ಆಕೆಯು ನಿರೀಕ್ಷಿಸದೆ ಇದ್ದಂತಹ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅದೂ ಬಾಲಿವುಡ್ ಚಿತ್ರದಲ್ಲಿ ನಟಿಸಲು! ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ತಮ್ಮ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗಿ ಶ್ವೇತಳನ್ನು ಆಯ್ಕೆ ಮಾಡಿ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಸಂಗತಿ ಬಿಚ್ಚಿಟ್ಟಿದ್ದಾರೆ ಹನ್ಸಲ್.  
 
ನನ್ನ ಮುಂದಿನ ಚಿತ್ರಕ್ಕೆ  ಶ್ವೇತ  ಬಸುಗೆ  ಅವಕಾಶ ನೀಡ ಬೇಕು ಎಂದು ಭಾವಿಸಿದ್ದೇನೆ. ಮಕಡಿಯಲ್ಲಿ ಆಕೆ ಅದ್ಭುತವಾಗಿ ನಟಿಸಿದ್ದಾರೆ ಎಂದು ಟ್ವೀಟ್  ಮಾಡಿದ್ದಾರೆ. ವ್ಯಭಿಚಾರದ ಕೇಸ್‌ಗೆ ಸಂಬಂಧಪಟ್ಟಂತೆ ಸಿಕ್ಕಿ ಹಾಕಿಕೊಂಡಿರುವ ಆಕೆಯನ್ನು ನಿರ್ಲಕ್ಷಿಸುವುದು ಎಳ್ಳಷ್ಟು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕೆಯ ಪೋಟೋಗಳನ್ನು, ಸುದ್ದಿಯನ್ನು  ಕೆಟ್ಟದಾಗಿ  ಪ್ರದರ್ಶಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಕಲಾವಿದರಾದ ಅದಿತಿ ರಾವ್, ಉಪೇನ್ ಪಟೇಲ್  ಸಹಿತ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹೈದರಾಬಾದ್‌ನ ಲಾಡ್ಜ್ ಒಂದರಲ್ಲಿ ನಡೆಸುತ್ತಿದ್ದ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಶ್ವೇತ ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಳೆ. ಆಕೆಯು ತನಗೆ ಸಿನಿಮಾದಲ್ಲಿ ಅವಕಾಶಗಳು ಸಿಗದ ಕಾರಣ ಇಂತಹ ವೃತ್ತಿಗೆ ಇಳಿಯ ಬೇಕಾಯ್ತು ಎಂದು ಪೊಲೀಸರ ಮುಂದೆ  ಹೇಳಿದ್ದಾಳೆ.  
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments