Select Your Language

Notifications

webdunia
webdunia
webdunia
webdunia

ಶ್ವೇತ ಬಸು ಪ್ರಸಾದ್ ಗೆ ಬಯಸದೆ ಬಂದ ಅವಕಾಶ

ಶ್ವೇತ ಬಸು ಪ್ರಸಾದ್ ಗೆ ಬಯಸದೆ ಬಂದ ಅವಕಾಶ
ಹೈದರಾಬಾದ್‌ , ಶನಿವಾರ, 6 ಸೆಪ್ಟಂಬರ್ 2014 (10:03 IST)
ಮಕಡಿ ಚಿತ್ರದ  ಬಾಲ ನಟಿ, ಅನೇಕ ಅವಾರ್ಡ್‌ಗಳನ್ನೂ ಪಡೆದಾಕೆ ಶ್ವೇತ ಬಸು ಪ್ರಸಾದ್ ವೇಶ್ಯಾವಾಟಿಕೆಯ ಕಾರಣದಿಂದ ಅರೆಸ್ಟ್ ಆಗಿದ್ದಾಳೆ. ಇಷ್ಟು ದಿನ ಆಕೆಗೆ ಇಂತಹ ಇಂದು ಸುಗ್ಗಿ ಕಾಲ ಇತ್ತೋ ಇಲ್ಲವೋ, ಆದರೆ ಈಗ ಒಳ್ಳೆಯ ಕಾಲ ಆರಂಭ ಆದಂತಿದೆ. ಆಕೆಯು ನಿರೀಕ್ಷಿಸದೆ ಇದ್ದಂತಹ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಅದೂ ಬಾಲಿವುಡ್ ಚಿತ್ರದಲ್ಲಿ ನಟಿಸಲು! ಬಾಲಿವುಡ್ ನಿರ್ದೇಶಕ ಹನ್ಸಲ್ ಮೆಹ್ತಾ ತಮ್ಮ ಮುಂದಿನ ಚಿತ್ರಕ್ಕೆ ಹೀರೋಯಿನ್ ಆಗಿ ಶ್ವೇತಳನ್ನು ಆಯ್ಕೆ ಮಾಡಿ ಎಲ್ಲರಲ್ಲೂ ಆಶ್ಚರ್ಯ ಉಂಟು ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಸಂಗತಿ ಬಿಚ್ಚಿಟ್ಟಿದ್ದಾರೆ ಹನ್ಸಲ್.  
 
ನನ್ನ ಮುಂದಿನ ಚಿತ್ರಕ್ಕೆ  ಶ್ವೇತ  ಬಸುಗೆ  ಅವಕಾಶ ನೀಡ ಬೇಕು ಎಂದು ಭಾವಿಸಿದ್ದೇನೆ. ಮಕಡಿಯಲ್ಲಿ ಆಕೆ ಅದ್ಭುತವಾಗಿ ನಟಿಸಿದ್ದಾರೆ ಎಂದು ಟ್ವೀಟ್  ಮಾಡಿದ್ದಾರೆ. ವ್ಯಭಿಚಾರದ ಕೇಸ್‌ಗೆ ಸಂಬಂಧಪಟ್ಟಂತೆ ಸಿಕ್ಕಿ ಹಾಕಿಕೊಂಡಿರುವ ಆಕೆಯನ್ನು ನಿರ್ಲಕ್ಷಿಸುವುದು ಎಳ್ಳಷ್ಟು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಕೆಯ ಪೋಟೋಗಳನ್ನು, ಸುದ್ದಿಯನ್ನು  ಕೆಟ್ಟದಾಗಿ  ಪ್ರದರ್ಶಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಕಲಾವಿದರಾದ ಅದಿತಿ ರಾವ್, ಉಪೇನ್ ಪಟೇಲ್  ಸಹಿತ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಹೈದರಾಬಾದ್‌ನ ಲಾಡ್ಜ್ ಒಂದರಲ್ಲಿ ನಡೆಸುತ್ತಿದ್ದ ದಂಧೆಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಶ್ವೇತ ಈಗ ಪೊಲೀಸ್ ಕಸ್ಟಡಿಯಲ್ಲಿ ಇದ್ದಾಳೆ. ಆಕೆಯು ತನಗೆ ಸಿನಿಮಾದಲ್ಲಿ ಅವಕಾಶಗಳು ಸಿಗದ ಕಾರಣ ಇಂತಹ ವೃತ್ತಿಗೆ ಇಳಿಯ ಬೇಕಾಯ್ತು ಎಂದು ಪೊಲೀಸರ ಮುಂದೆ  ಹೇಳಿದ್ದಾಳೆ.  
 

Share this Story:

Follow Webdunia kannada