Webdunia - Bharat's app for daily news and videos

Install App

ತೆಲುಗು ಹೀರೋಗಳ ಯಶಸ್ಸಿಗೆ ಕನ್ನಡ ಟಾಪ್ ಹೀರೋಗಳ ಅಡ್ಡಗಾಲು ?

Webdunia
ಮಂಗಳವಾರ, 2 ಸೆಪ್ಟಂಬರ್ 2014 (09:23 IST)
ಕರ್ನಾಟಕದಲ್ಲಿ ಟಾಲಿವುಡ್ ಚಿತ್ರಗಳು ತೋಪಾಗುತ್ತಿದೆ ಎನ್ನುವ ಸುದ್ದಿ ಈಗ ಟಾಲಿವುಡ್   ನಗರವಾಸಿಗಳನ್ನು ಕೆಂಗೆಡಿಸಿದೆ.ಅವರು ನಿರೀಕ್ಷಿಸಿದಂತೆ ಆಗಿದ್ದಿದ್ದರೇ!! ತೆಲುಗು ಚಿತ್ರಗಳನ್ನು ನಿರ್ಮಿಸಿದ  ನಿರ್ಮಾಪಕರು ಬೆಂಗಳೂರಿಗರ ಹಣವನ್ನು ತಮ್ಮ ಚೀಲದಲ್ಲಿ ತುಂಬಿಕೊಂಡು ಹೋಗ ಬೇಕಿತ್ತು. ಆದರೆ ಹಾಗೆ ಆಗಲಿಲ್ಲ. ಅವರ ಕನಸನ್ನು ಕನ್ನಡದ ಪ್ರೇಕ್ಷಕ ನನಸು ಮಾಡಿಲ್ಲ, ಅವರ ಆಸೆಗೆ ತಣ್ಣೀರು ಎರೆಚಿದ್ದಾನೆ.  ಮುಖ್ಯವಾಗಿ  ತೆಲುಗು ಚಿತ್ರನಟರ ಚಿತ್ರಗಳಿಗೆ ಒಳ್ಳೆಯ ಓಪನಿಂಗ್ಸ್ ಇರುತ್ತದೆ ಆದರೆ ಅದನ್ನು ಕನ್ನಡದ ಪವರ್ ಸ್ಟಾರ್  ಪುನೀತ್ ರಾಜ್ ಕುಮಾರ್ ತಮ್ಮ ಪವರ್ ಮೂಲಕ ಕುಂದಿಸಿದ್ದಾರೆ. ಕಳೆದವಾರ ಬಿಡುಗಡೆ ಆದ ಪವರ್ *** ಚಿತ್ರವು ಸಾಕಷ್ಟು ಗಳಿಕೆ ಮಾಡಿದೆ. ಆದಾದ ನಂತರ ಶುಕ್ರವಾರ  ಬಿಡುಗಡೆ ಆದ ಎಂಟಿಆರ್ ಅವರ ಚಿತ್ರ ರಭಸ ಪವರ್ ಮುಂದೆ ಸೋತು ಹೈರಾಣಾಗಿದೆ.  
 
ಎಲ್ಲರಿಗೂ ಗೊತ್ತು ಬೆಂಗಳೂರಿನಲ್ಲಿ ಕನ್ನಡದವರಿಗಿಂತ ಬೇರೆ ಭಾಷಿಗರ ಪ್ರಾಬಲ್ಯ ಹೆಚ್ಚು. ಆ ಕಾರಣದಿಂದ ಕನ್ನಡ ಚಿತ್ರಗಳು ಹೆಚ್ಚು ದಿನ ಉಸಿರಾಟ ನಡೆಸಲ್ಲ ಎನ್ನುವ ಸಂಗತಿ ಸಹಿತ ಎನ್ನೋದು ಗೊತ್ತೇ ಇದೆ ಆದರೆ. ಕಳೆದವಾರ ಬಿಡುಗಡೆಯಾದ ಪುನೀತ್ ಅವರ ಅಭಿನಯದ  ಪವರ್ ಆ ಲೆಕ್ಕಾಚಾರವನ್ನು  ಬುಡಮೇಲು ಮಾಡಿದೆ.  ಮಹೇಶ್ ಬಾಬು ಅವರ ನಟನೆಯ ಆಗಡು ಚಿತ್ರ ಸೆಪ್ಟೆಂಬರ್ 19  ರಂದು ಬಿಡುಗಡೆ ಆಗಲಿದೆ. ಅಂದೇ  ಅಂದರೆ ಒಂದು ದಿನ ಮುನ್ನ 18  ನೇ ತಾರೀಖಿನಂದು ಕನ್ನಡದ ಟಾಪ್ ಹೀರೋಗಳಲ್ಲಿ  ಒಬ್ಬರಾದ ಉಪೇಂದ್ರ ಅವರ ನಟನೆಯ  ಸೂಪರ್ರೋ ರಂಗ ಸಹ ಬಿಡುಗಡೆ ಆಗಲಿದೆ. ಇದರಿಂದ  ಸಣ್ಣ ಮಟ್ಟದಲ್ಲಿ ಭಯ ಆರಂಭ ಆಗಿದೆ ಟಾಲಿವುಡ್ ನಿರ್ಮಾಪಕರಿಗೆ! ಹಾಗಂತ ಸುದ್ದಿ ಹರಡಿದೆ. 
 
 ಇಷ್ಟೆಲ್ಲಾ ವಿಷಯದ ನಡುವೆ ಮತ್ತೊಂದು ಸಂಗತಿ ಏನೆಂದರೆ ತೆಲುಗು ಟಾಪ್ ಹೀರೋ  ರಾಮ್ ಚರಣ್ ತೇಜಾ ಅವರ  ಸಿನಿಮಾ ವಿಷಯದಲ್ಲೂ ಸಹಿತ ಆತಂಕ ಎದುರಾಗುವಂತಹ ಪರಿಸ್ಥಿತಿ   ಉಂಟಾಗಿದೆ. ಅವರು ನಟಿಸಿರುವ ಗೋವಿಂದುಡು ಅಂದರಿವಾಡಿಲೋ ಚಿತ್ರವೂ  ಅಕ್ಟೋಬರ್ 1  ರಂದು ಬಿಡುಗಡೆ ಆಗಲಿದೆ, ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ  ಬಹುನೀರಿಕ್ಷಿತ ಚಿತ್ರ ಅಂಬರೀಶ ಬಿಡುಗಡೆ ಆಗಲಿದೆ. ಈ ಮೂಲಕ ತೆಲುಗು ಯಂಗ್ ಹೀರೋಗಳು ಕನ್ನಡ ಟಾಪ್ ಹೀರೋಗಳ ಸ್ಪರ್ಧೆ ಎದುರಿಸುವ ಪರಿಸ್ಥತಿ ಉಂಟಾಗಿದೆ.ಮುಖ್ಯವಾಗಿ  ಕರ್ನಾಟಕದಲ್ಲಿ ತೆಲುಗು ಚಿತ್ರಗಳಿಗೆ ಹಂಚಿಕೆದಾರಾಗಿರುವವರಿಗೆ ಭಯ ಶುರು ಆಗಿದೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments