Select Your Language

Notifications

webdunia
webdunia
webdunia
webdunia

ಇಲ್ಲಿ ಬ್ರಹ್ಮ ಅಲ್ಲಿ ರಾಜವಂಸಂ ಇದು ಉಪ್ಪಿ ಸಿನಿಮಾ ಮಹಿಮೆ !

ಇಲ್ಲಿ  ಬ್ರಹ್ಮ ಅಲ್ಲಿ ರಾಜವಂಸಂ ಇದು ಉಪ್ಪಿ  ಸಿನಿಮಾ ಮಹಿಮೆ !
ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2014 (10:25 IST)
ಕನ್ನಡ ಚಿತ್ರರಂಗದಲ್ಲಿ ಹೊಸತನಗಳತ್ತ ಕೈಚಾಚುವ ಪ್ರತಿಭೆಗಳು ಅಂದ್ರೆ ನಿರ್ದೇಶಕ ಆರ್ ಚಂದ್ರು ಮತ್ತು ನಟ - ನಿರ್ದೇಶಕ ಉಪೇಂದ್ರ. ಅವರ ಕಾಂಬಿನೇಶನ್ ನ ಬ್ರಹ್ಮ ಈಗ ತಮಿಳು ಮಂದಿಯನ್ನು ರಂಜಿಸಲು ಸಿದ್ಧ ಆಗಿದೆ. ಆ ಚಿತ್ರವನ್ನು ಕೇವಲ ಕನ್ನಡ ಮಾತ್ರವಲ್ಲ ತಮಿಳು ಮತ್ತು ತೆಲುಗು ಪೀಪಲ್ ನೋಡುವುದಕ್ಕೆ ಅಗತ್ಯ ಇರುವ ಡಬ್ಬಿಂಗ್ ಕೆಲಸ ಮಾಡ್ತಿವಿ ಎನ್ನುವ ಸುದ್ದಿ ಹರಡಿತ್ತು ಆಗ. ಆದರೆ ಕನ್ನಡದಲ್ಲಿ   ಅದು  ಬಿಡುಗಡೆ ಆಗಿ ಯಶಸ್ವಿ ಆದರೂ ಸಹಿತ ಆ ಚಿತ್ರದ ತಮಿಳು- ತೆಲುಗು  ಭಾಷೆಯಲ್ಲಿ ಬಿಡುಗಡೆ ಮಾಡುವ ಸಂಗತಿ ಸೈಲೆಂಟಾಗಿ ಉಳಿದಿತ್ತು, ಆದರೆ ಈಗ ಬಂದಿರುವ ಮತ್ತು ಸಿಕ್ಕಿರೋ ಸುದ್ದಿ ಪ್ರಕಾರ  ಬ್ರಹ್ಮ ಈಗ ರಾಜವಂಸಂ ಎನ್ನುವ ಹೆಸರಿನಿಂದ ಜನರ ಮುಂದೆ ಬರಲು ಸಿದ್ಧ ಆಗಿದೆ.ಕೇವಲ ಕನ್ನಡ ಮಾತ್ರವಲ್ಲ ತೆಲುಗು ಮತ್ತು ತಮಿಳು ವೀಕ್ಷಕರಿಗೆ ಉಪೇಂದ್ರ ನಟನೆ ಬಗ್ಗೆ ಅರಿವಿದೆ.
 
ಅವರು ಈಗಾಗಲೇ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಕೆಲವೇ  ಕೆಲವು ನಟರು ಬೇರೆ ಭಾಷೆಯ ವೀಕ್ಷಕರಿಗೆ ಗೊತ್ತು ಅವರಲ್ಲಿ ಉಪ್ಪಿ ಸಹ ಒಬ್ಬರಾಗಿದ್ದಾರೆ. ಈ ಚಿತ್ರದ ಹಾಡುಗಳಿಗೆ ಸಂಗೀತ  ನಿರ್ದೇಶನ ಮಾಡಿದ್ದವರು ಗುರುಕಿರಣ್. ಹಾಡುಗಳು ಅತ್ಯಂತ ಜನಪ್ರಿಯ ಆಗಿತ್ತು. ಈಗ ರಾಜವಂಸಂ ಎನ್ನುವ ಹೆಸರಿನಿಂದ ತೆಲುಗು ಮತ್ತು ತಮಿಳು ಭಾಷಿಗರ ಮನ ರಂಜಿಸಲು ಸಿದ್ಧವಾಗಿದ್ದಾರೆ ಉಪ್ಪಿ ಅಂಡ್ ಟೀಮ್ .

Share this Story:

Follow Webdunia kannada