Webdunia - Bharat's app for daily news and videos

Install App

ಸಾಹಸಪ್ರಿಯರಿಗೆ ಖುಷಿ ಪಡಿಸಲು ಅಭಿಮನ್ಯು ಅರ್ಜುನ್ ಸರ್ಜಾ ಬರ್ತಾ ಇದ್ದಾರೆ!

Webdunia
ಶುಕ್ರವಾರ, 22 ಆಗಸ್ಟ್ 2014 (10:12 IST)
ನಟ ಅರ್ಜುನ್ ಸರ್ಜಾ ದಕ್ಷಿಣ ಭಾರತದ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿರುವ ಅರ್ಜುನ್ ಕೆಲವು ಕಾಲಗಳಿಂದ ಚಿತ್ರದಲ್ಲಿ ನಟಿಸುವುದಕ್ಕೆ ಆದ್ಯತೆ ಕೊಡಲಿಲ್ಲ. ಆದರೆ ಮತ್ತೊಮ್ಮೆ ಅವರು ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ. ಈ ಮುಖಾಂತರ ಅವರ ಅಭಿಮಾನಿಗಳ ಮನದಲ್ಲಿ ಖುಷಿ ಹೆಚ್ಚಿಸಿದ್ದಾರೆ. ಆಕ್ಷನ್ ಕಿಂಗ್ ಎನ್ನುವ  ಬಿರಿದು ಪಡೆದಿರುವ ಈ ಪ್ರತಿಭಾವಂತ ನಟ ತಮ್ಮ ನಿರ್ದೇಶನದ ಚಿತ್ರ ಅಭಿಮನ್ಯು ವಿನಲ್ಲಿ ನಟಿಸಲು ರೆಡಿ ಆಗುತ್ತಿದ್ದಾರೆ. ತಾವುನಟನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಅರ್ಜುನ್ ಮತ್ತೆ ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ. 
 
ಈ ಚಿತ್ರದಲ್ಲಿ ರವಿ ಕಾಳೆ, ರಾಹುಲ್ ದೇವ್, ದೊಡ್ಡಣ್ಣ, ಮುಂತಾದವರು ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ  ಎ ಆರ್ ರೆಹಮಾನ್  ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಭಿಮನ್ಯು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆ ಆಗಲಿದ್ದು, ಆ ಚಿತ್ರವು ಸಾಹಸ ಭರಿತ ಕಥಾ ಹಂದರವನ್ನು ಹೊಂದಿದೆಯಂತೆ.ಆಕ್ಷನ್ ಪ್ರಿಯರಿಗೆ ಅರ್ಜುನ್  ಸಾಹಸದ ಭರಪೂರ ಮನೋರಂಜನೆ ನೀಡಲು ಸಿದ್ಧ ಆಗ್ತಾ ಇದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments