Select Your Language

Notifications

webdunia
webdunia
webdunia
webdunia

ಸಾಹಸಪ್ರಿಯರಿಗೆ ಖುಷಿ ಪಡಿಸಲು ಅಭಿಮನ್ಯು ಅರ್ಜುನ್ ಸರ್ಜಾ ಬರ್ತಾ ಇದ್ದಾರೆ!

ಸಾಹಸಪ್ರಿಯರಿಗೆ ಖುಷಿ ಪಡಿಸಲು ಅಭಿಮನ್ಯು ಅರ್ಜುನ್ ಸರ್ಜಾ ಬರ್ತಾ ಇದ್ದಾರೆ!
ಬೆಂಗಳೂರು , ಶುಕ್ರವಾರ, 22 ಆಗಸ್ಟ್ 2014 (10:12 IST)
ನಟ ಅರ್ಜುನ್ ಸರ್ಜಾ ದಕ್ಷಿಣ ಭಾರತದ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿರುವ ಅರ್ಜುನ್ ಕೆಲವು ಕಾಲಗಳಿಂದ ಚಿತ್ರದಲ್ಲಿ ನಟಿಸುವುದಕ್ಕೆ ಆದ್ಯತೆ ಕೊಡಲಿಲ್ಲ. ಆದರೆ ಮತ್ತೊಮ್ಮೆ ಅವರು ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ. ಈ ಮುಖಾಂತರ ಅವರ ಅಭಿಮಾನಿಗಳ ಮನದಲ್ಲಿ ಖುಷಿ ಹೆಚ್ಚಿಸಿದ್ದಾರೆ. ಆಕ್ಷನ್ ಕಿಂಗ್ ಎನ್ನುವ  ಬಿರಿದು ಪಡೆದಿರುವ ಈ ಪ್ರತಿಭಾವಂತ ನಟ ತಮ್ಮ ನಿರ್ದೇಶನದ ಚಿತ್ರ ಅಭಿಮನ್ಯು ವಿನಲ್ಲಿ ನಟಿಸಲು ರೆಡಿ ಆಗುತ್ತಿದ್ದಾರೆ. ತಾವುನಟನೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿರುವ ಅರ್ಜುನ್ ಮತ್ತೆ ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ. 
 
ಈ ಚಿತ್ರದಲ್ಲಿ ರವಿ ಕಾಳೆ, ರಾಹುಲ್ ದೇವ್, ದೊಡ್ಡಣ್ಣ, ಮುಂತಾದವರು ನಟಿಸುತ್ತಿದ್ದಾರೆ. ಸ್ಯಾಂಡಲ್ ವುಡ್ ನ  ಎ ಆರ್ ರೆಹಮಾನ್  ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಭಿಮನ್ಯು ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಬಿಡುಗಡೆ ಆಗಲಿದ್ದು, ಆ ಚಿತ್ರವು ಸಾಹಸ ಭರಿತ ಕಥಾ ಹಂದರವನ್ನು ಹೊಂದಿದೆಯಂತೆ.ಆಕ್ಷನ್ ಪ್ರಿಯರಿಗೆ ಅರ್ಜುನ್  ಸಾಹಸದ ಭರಪೂರ ಮನೋರಂಜನೆ ನೀಡಲು ಸಿದ್ಧ ಆಗ್ತಾ ಇದ್ದಾರೆ. 

Share this Story:

Follow Webdunia kannada