Select Your Language

Notifications

webdunia
webdunia
webdunia
webdunia

ಕಳುವಾದ ರುದ್ರಮದೇವಿ ಒಡವೆಗಳು ಚೆನ್ನೈ ನಗರದಲ್ಲಿ ?

ಕಳುವಾದ ರುದ್ರಮದೇವಿ ಒಡವೆಗಳು ಚೆನ್ನೈ ನಗರದಲ್ಲಿ ?
ಹೈದ್ರಾಬಾದ್‌‌ , ಬುಧವಾರ, 20 ಆಗಸ್ಟ್ 2014 (10:28 IST)
ಸಾಕಷ್ಟು ದಿನಗಳಿಂದ ಅನುಷ್ಕ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ರುದ್ರಮ ದೇವಿ ಸಾಕಷ್ಟು ಸದ್ದು ಮಾಡುತ್ತಿದೆ. ಕಳೆದ ತಿಂಗಳು ಆ ಚಿತ್ರದಲ್ಲಿ ಅನುಷ್ಕ ಧರಿಸಿದ್ದ ಚಿನ್ನದ ಆಭರಣಗಳು ಕಳುವಾದ ಬಗ್ಗೆ ಬರೆದಿದ್ದೆವು. ಅವುಗಳು ಈಗ ಚೆನ್ನೈ ನಲ್ಲಿ ಇದೆ ಎನ್ನುವ ಒಂದು ಶಂಕೆ ಆರಂಭ ಆಗಿದೆ ಪೊಲೀಸ್ ಮಂದಿಗೆ ಆ ದೃಷ್ಟಿಕೋನದಲ್ಲಿ ಅವರು ತನಿಖೆ ಆರಂಭ ಮಾಡಿದ್ದಾರೆ.  ತೆಲುಗು ಇತಿಹಾಸದಲ್ಲಿ ಪ್ರಜ್ವಲ ಹೆಸರನ್ನು ಪಡೆದ ರಾಣಿ ರುದ್ರಮ್ಮ. ಆಕೆಯ ಹೆಸರಿನ ಚಿತ್ರ ಈಗ ತೆರೆ ಏರಲು ಸಿದ್ಧತೆ ನಡೆದಿದೆ. ಕಾಕತೀಯ ರಾಜರ ಪಟ್ಟದ ರಾಣಿ ಆಗಿದ್ದ ರುದ್ರಮದೇವಿ ಪಾತ್ರವನ್ನು ಅನುಷ್ಕ ಶೆಟ್ಟಿ ಮಾಡುತ್ತಿದ್ದಾರೆ. ಗುಣಶೇಖರ್ ಅವರ ನಿರ್ದೇಶನದ ಈ ಚಿತ್ರಕ್ಕೆ ಅನುಷ್ಕ ಧರಿಸಲೆಂದು ಸುಮಾರು ಐದು ಕೋಟಿಗಳಷ್ಟು  ಮೊತ್ತದ ಆಭರಣವನ್ನು ಬಳಕೆ ಮಾಡಲಾಗಿದೆ. ಇದು ಸಂಪೂರ್ಣ ಚಿನ್ನ ಮತ್ತು ಬೆಳ್ಳಿಯಿಂದ ತಯಾರಾಗಿದೆ.  
 
ಈ ಆಭರಣಗಳನ್ನು ಚೆನ್ನೈ ನಗರದ ಪ್ರಸಿದ್ಧ ಒಡವೆ ಅಂಗಡಿಯಲ್ಲಿ ಕೊಂಡಿದ್ದರು ಚಿತ್ರತಂಡ. ಈ ಬೆಲೆ ಬಾಳುವ ಒಡವೆಗಳು ಕಳ್ಳತನ ಆಯ್ತು. ಈ ಸಂಗತಿಯನ್ನು ನಿರ್ಮಾಪಕ ಹೈದರಾಬಾದ್ ನ ಪೊಲೀಸರಿಗೆ ದೂರು ನೀಡಿದ್ದರು. 
 ಕೇಸು ನಮೂದಾಗಿ ಈ ಕುರಿತು ಪೊಲೀಸರು ಅದರ ಬಗ್ಗೆ ತನಿಖೆ ಮಾಡಲು ಆರಂಭಿಸಿದರು. ಆಗ ವಿಮಾನ ನಿಲ್ದಾಣದ ಸಿಸಿ ಕ್ಯಾಮರಾವನ್ನು ಕೂಲಂಕಷವಾಗಿ ಪರಿಶೀಲಿಸಿದರು. 
 
 ಕಳೆದವಾರ ಶನಿವಾರ ಪೊಲೀಸರು ಒಂದು ಸುಳುಹಿನ ಅನ್ವಯ ಚೆನ್ನೈಗೆ ಬಂದರು. ಅಲ್ಲಿನ ಪೊಲೀಸರ ಸಹಾಯದಿಂದ ಸಿಸಿ ಕ್ಯಾಮರ ಫುಟೇಜ್ ಗಮನಿಸಿ ಅನುಮಾನ ಬಂದ ಸನ್ನಿವೇಶವನ್ನು ಸೀಡಿಯಲ್ಲಿ ಶೇಖರಿಸಿ ಕೊಂಡೊಯ್ದರು. ಒಟ್ಟಾರೆ ಈಗ ಪೊಲೀಸರು ತ್ವರಿತಗತಿಯಿಂದ ವಿಚಾರಣೆ ನಡೆಸಿದ್ದಾರೆ. 

Share this Story:

Follow Webdunia kannada