Webdunia - Bharat's app for daily news and videos

Install App

ಮೊದಲು ನನ್ನ ಕಂಡೀಶನ್ ಗೆ ಒಪ್ಪಿಗೆ ಕೊಡಿ ಆಮೇಲೆ ಏನಿದ್ರು ಸಿನಿಮಾದಲ್ಲಿ ನಟನೆ - ದರ್ಶನ್

Webdunia
ಮಂಗಳವಾರ, 19 ಆಗಸ್ಟ್ 2014 (10:00 IST)
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿನಯ ಮತ್ತು ಸಾಹಸಗಳಿಂದ ಅವರ ಅಭಿಮಾನಿಗಳನ್ನು ರಂಜಿಸ್ತಾ ಇರೋ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಅವರು ತಮ್ಮ ಸಿನಿಮಾ ಕೆಲಸದಲ್ಲೇ ಎಷ್ಟು ಪರ್ಫೆಕ್ಟ್ ಆಗಿದ್ದಾರೋ ಅಷ್ಟೇ ಪರ್ಫೆಕ್ಟ್ ತಮ್ಮ ಹಣಕಾಸಿನ ವಿಷಯದಲ್ಲೂ ಸಹ. ಈಗ ಅನೇಕ ದಿನಗಳಿಂದ ನೆನೆಗುದಿಯಲ್ಲಿ ಇದ್ದ ಸಂಗತಿ ವಿರಾಟ್ ಚಿತ್ರದ ನಿರ್ಮಾಣ. ಈ ಚಿತ್ರ ಇನ್ನು ಸ್ವಲ್ಪ ದಿನಗಳನ್ನು ಪೂರೈಸಬೇಕಾಗಿದೆ. ಆದರೆ ಹಣಕಾಸಿನ ವಿಷಯದಲ್ಲಿ ಅದು ತನ್ನ ಕೆಲಸ ಅರ್ಧಕ್ಕೆ ನಿಲ್ಲುವಂತಾಗಿದೆ . ಆದರೆ ಎಲ್ಲ ಸೆಟಲ್ ಮಾಡಿ ನಂತರ ಮುಂದಿನ ಸಂಗತಿ ಎನ್ನುವ ಮಾತನ್ನು ಹೇಳಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅವರ ಈ ಚಿತ್ರವನ್ನು  ಕಲ್ಯಾಣ್ ಅವರು ನಿರ್ಮಿಸುತ್ತಿದ್ದಾರೆ. 
 
ಕೇವಲ ಶೇ.20  ರಷ್ಟು  ಭಾಗ ಮಾತ್ರ  ಶೂಟಿಂಗ್ ಮಾಡ ಬೇಕಾಗಿದೆ. ನಾನು ವಿರಾಟ್ ಚಿತ್ರದಲ್ಲಿ ನಟಿಸಲೆಂದು ಬೇರೆ ಯಾವ   ಸಿನಿಮಾಗಳಲ್ಲೂ ನಟಿಸಲು ಸಮ್ಮತಿಸಿಲ್ಲ ಕಳೆದ ಆರು ತಿಂಗಳಿಂದ. ಬುಲ್ ಬುಲ್ ನಂತರ  ಈ ಪ್ರಾಜೆಕ್ಟ್ ಕಡೆಗೆ ಆದ್ಯತೆ ನೀಡಿದ್ದೇನೆ. ನಾನು  ಹಾಕಿರುವ ಕಂಡಿಶನ್ಸ್ ಗೆ ನಿರ್ಮಾಪಕರು ಸಮ್ಮತಿಸಿದರೆ ನಾನು ಈ ಚಿತ್ರದಲ್ಲಿ ಕೆಲಸ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ ದರ್ಶನ್.  ಪ್ರಸ್ತುತ ದರ್ಶನ್ ಅವರ ಚಿತ್ರ ಅಂಬರೀಶ  ಕೆಲಸ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಿಯಾಮಣಿ ಮತ್ತು ರಚಿತ ರಾಮ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ಇತ್ತೀಚಿಗೆ ಇದರ ಹಾಡುಗಳು ಬಿಡುಗಡೆ ಆಗಿದ್ದು, ಅದು  ಜನರ ಮನ ಗೆದ್ದು ಮೊದಲ ಸ್ಥಾನದಲ್ಲಿದೆ .

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments