Select Your Language

Notifications

webdunia
webdunia
webdunia
webdunia

ರಜನಿ ಕಾಂತ್ ರಾಜಕೀಯ ಕ್ಷೇತ್ರಕ್ಕೆ ಹೊರಡುವ ಸಮಯ ಸನ್ನಿಹಿತ ?

ರಜನಿ ಕಾಂತ್  ರಾಜಕೀಯ ಕ್ಷೇತ್ರಕ್ಕೆ ಹೊರಡುವ ಸಮಯ ಸನ್ನಿಹಿತ ?
ಬೆಂಗಳೂರು , ಸೋಮವಾರ, 18 ಆಗಸ್ಟ್ 2014 (10:23 IST)
ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶಕ್ಕೆ ಕಾಲ ಸನ್ನಿಹಿತ ಆಗಿದೆಯೇ ಎನ್ನುವ ಪ್ರಶ್ನೆಗೆ ಈಗ ಸ್ಪಷ್ಟ ರೂಪ ಬರುವ ಕಾಲ ಬಂದಿದೆ. ಏಕೆಂದರೆ ಅವರು ಈಗ ಅಂತಹ ಭಾವ ಬರುವಂತಹ ಮಾತುಗಳನ್ನು ಮೀಡಿಯಾದವರ ಮುಂದೆ ಆಡಿದ್ದಾರೆ.  ರಾಜಕೀಯ ಕ್ಷೇತ್ರ ಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುತ್ತಾರೆ ಎನ್ನುವ ಸುದ್ದಿಗೆ  ಪುಷ್ಟಿ ದೊರಕುವಂತೆ ಮಾತಾಡಿದ್ದಾರೆ ಸೂಪರ್ ಸ್ಟಾರ್. ಇತ್ತೀಚಿಗೆ ಅವರ ಬೆಂಗಳೂರಲ್ಲಿ ಮಾಧ್ಯಮದವರ ಮುಂದೆ ಆಡಿದ ಮಾತು ಸಂಚಲನ ಉಂಟು ಮಾಡಿದೆ ಎಂದೇ ಹೇಳ ಬಹುದಾಗಿದೆ. ಇದು ಕಾಲಿವುಡ್ ಮೀಡಿಯಾದವರ ಹಾಟ್ ಟಾಪಿಕ್ ಆಗಿದೆ. 
 
ರಾಜಕೀಯಕ್ಕೆ ಬರುತ್ತಿದ್ದಿರಾ? ಎನ್ನುವ ಮೀಡಿಯ ಪ್ರತಿನಿಧಿ ಒಬ್ಬರ ಪ್ರಶ್ನೆಗೆ ರಜನಿ ದೇವರು ಯಾವ ಹಾದಿಯಲ್ಲಿ ನಡೆಸಿದರೆ ಆ ಹಾದಿಯತ್ತ ನಡೆಯುತ್ತೇನೆ ಎನ್ನುವ ಮಾತನ್ನು ಹೇಳಿದ್ದಾರೆ. ಈ ಉತ್ತರವೂ ಮುಂಬರುವ ತಮಿಳುನಾಡಿನ ಅಸೆಂಬ್ಲಿ ಎಲೆಕ್ಷನ್ ಕುರಿತು ಆಡಿದ ಮಾತುಗಳಾಗಿರ ಬಹುದು ಎನ್ನುವ ಒಂದು ಶಂಕೆ ಹಾಗೂ ಊಹೆ ಕಾಲಿವುಡ್ ಮಂದಿಯಲ್ಲಿ  ಮನೆ ಮಾಡಿದೆ. 
 ರಜನಿ ಕಾಂತ್ ಅವರ  ಜನ್ಮದಿನ ಡಿಸೆಂಬರ್ 12  ಅಂದು ಅವರ   ಬಹು ನಿರೀಕ್ಷಿತ ಚಿತ್ರ ಲಿಂಗಾ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಆ ಚಿತ್ರವೂ ಅದ್ಭುತವಾದ ಯಶಸ್ಸು ಹೊಂದಿದರೆ ಅವರು ನಿಶ್ಚಿತವಾಗಿ ರಾಜಕೀಯ ರಂಗದ ಪ್ರವೇಶ ಮಾಡುತ್ತಾರೆ ಎಂದು ನಂಬಲಾಗಿದೆ. ಇದು ಸಾಧ್ಯವಾದರೆ ತಮಿಳು ನಾಡಲ್ಲಿ ಬದಲಾವಣೆ ಖಾಯಂ . ಆದರೆ ದೇವರ ಇಚ್ಛೆ ಹೇಗಿದೆಯೋ ನೋಡುವ !
 

Share this Story:

Follow Webdunia kannada