Select Your Language

Notifications

webdunia
webdunia
webdunia
webdunia

ನಾನು ಅತಿಯಾಸೆ ಪಡಲ್ಲ ದುಡ್ಡು ಅಂದ್ರೆ ಸಾಯಲ್ಲ ವದಂತಿಗಳನ್ನು ನಂಬದಿರಿ ಪ್ಲೀಸ್ ಪ್ಲೀಸ್

ನಾನು ಅತಿಯಾಸೆ ಪಡಲ್ಲ ದುಡ್ಡು ಅಂದ್ರೆ ಸಾಯಲ್ಲ ವದಂತಿಗಳನ್ನು ನಂಬದಿರಿ ಪ್ಲೀಸ್ ಪ್ಲೀಸ್
ಮುಂಬೈ , ಗುರುವಾರ, 14 ಆಗಸ್ಟ್ 2014 (10:20 IST)
ಇರುವುದರಲ್ಲಿ ತೃಪ್ತಿ ಪಡುವ ಗುಣ ನಂಗೆ ಚಿಕ್ಕಂದಿನಿಂದ ಬಂದಿದೆ. ಅತಿಯಾಸೆ ಪಡುವುದು ನನಗೆ ತುಂಬಾ ಅಸಹ್ಯ ಎಂದು ಅನ್ನಿಸುತ್ತದೆ. ಮುಖ್ಯವಾಗಿ ನನ್ನ ಸಂಭಾವನೆ ವಿಷಯದಲ್ಲಿ ಅನೇಕ ಬಗೆಯ ಗಾಸಿಪ್ ಗಳು ಇವೆ ಅವುಗಳನ್ನು ದಯಮಾಡಿ ನಂಬದಿರಿ ಎನ್ನುವ  ಮಾತನ್ನು ಹೇಳಿದ್ದಾಳೆ ಕಾಜಲ್ ಅಗರವಾಲ್. ನಿರ್ದೇಶಕ ಸುಧೀರ್ ಮಿಶ್ರ ಅವರ ಚಿತ್ರ ಪೆಹಲೆ ಆಪ್ ಜನಾಬ್ ಎನ್ನುವ ಚಿತ್ರಕ್ಕೆ ಆಕೆ ಓಕೆ ಅಂದಿರುವ ಸುದ್ದಿ ಕೇಳಿಬಂದಿದೆ . ನನ್ನ ಸಂಭಾವನೆ ಬಗ್ಗೆ ಮಾಧ್ಯಮಗಳು ಹಲವಾರು ಬಗೆಯ ಸುದ್ದಿ ಹರಡಿಸುತ್ತಿದೆ. ಅವೆಲ್ಲಾ ಸತ್ಯಕ್ಕೆ ದೂರ ಆಗಿರುವುದು ಆದ್ದರಿಂದ  ದಯಮಾಡಿ ಅಂತಹ ಸುದ್ದಿಗಳಿಗೆ ಆದ್ಯತೆ ನೀಡಬೇಡಿ ಎಂದು ಇತ್ತೀಚಿಗೆ ಮುಂಬೈನಲ್ಲಿ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಜಲ್ ಹೇಳಿದ್ದಾಳೆ.  
 
 ಏಕೆಂದರೆ ನಾನು ಮಾಡುವ ಕೆಲಸದ ಅನ್ವಯ ಮತ್ತು ಪಾತ್ರದ ಅನ್ವಯ ಮೊತ್ತ ತೆಗೆದು ಕೊಳ್ತೀನಿ. ಗ್ಲಾಮರ್ ಪಾತ್ರಗಳಲ್ಲಿ ನಟಿಸುವಾಗ  ಕೋಟಿಗಟ್ಟಲೆ ತೆಗೆದುಕೊಳ್ತೀನಿ ಎನ್ನುವ ಮಾತಿದೆ ಅವೆಲ್ಲ ಸುಳ್ಳು ಎಂದು ಹೇಳಿದ್ದಾಳೆ ಆಕೆ. ನನಗೆ ಯಾವುದೇ ಚಿತ್ರ ಆಗಿರಲಿ ನಟಿಸಲು ಆರಾಮದಾಯಕ ಆಗಿರ ಬೇಕು . ಇಲ್ಲದೆ ಇದ್ದಾರೆ ಸಕತ್ ಕಷ್ಟ. ದೊಡ್ಡ ಹೀರೋ, ದೊಡ್ಡ ಸಂಸ್ಥೆ ಅಂತ ಸಹಿ ಹಾಕಲ್ಲ ಎನ್ನುವ ಮಾತನ್ನು ಸಹಿತ ಈ ಸಮಯದಲ್ಲಿ ಹೇಳಿದ್ದಾಳೆ ಆ ಚೆಲುವೆ. 
 
ಆರಾಮವಾಗಿ ಬದುಕನ್ನು ನಡೆಸುತ್ತಿದ್ದ ಹುಡುಗಿ ಒಬ್ಬಳ ಬದುಕಲ್ಲಿ ಏರುಪೇರು ಉಂಟಾಗುತ್ತದೆ. ಆ ಬಳಿಕ ಏನಾಯ್ತು ಎನುವುದೇ ಈ ಚಿತ್ರದ ಕಥೆಯ  ಮೂಲ ಎಂದು ಸುಧೀರ್ ಅವರ ಚಿತ್ರದ ಬಗ್ಗೆ ಹೇಳಿದ್ದಾಳೆ. ಒಟ್ಟಾರೆ ಆಕೆಯ ಸಂಭಾವನೆ ಎಷ್ಟಾದರೂ ತೆಗೆದುಕೊಳ್ಳಲಿ ನಮಗೇನು.. ! ಎಷ್ಟು ಸಂಭಾವನೆ ಈ ಸಿನಿಮಾಕ್ಕೆ ತಗೊಂಡಿದ್ದೀಯ ಕಾಜಲ್ !! 

Share this Story:

Follow Webdunia kannada