ಕರ್ನಾಟಕ ಬುಲ್ಡೋಜರ್ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮುಖಾಂತರ ಸುದೀಪ್ ತಾನು ಅತ್ಯುತ್ತಮ ಆಟಗಾರ ಎನ್ನುವ ಸಂಗತಿಯನ್ನು ಜಗತ್ತಿಗೆ ತಿಳಿಸಿದ್ದಾರೆ. ಕೇವಲ ನಟನೆಯ ಮೂಲಕ ಅಲ್ಲ ಆಟದ ಮುಖಾಂತರವೂ ಎಲ್ಲರ ಮನಗೆದ್ದ ನಟ ಕಿಚ್ಚ. ಕಳೆದ ಎರಡು ವರ್ಷಗಳಿಂದ ನಿರಂತವಾಗಿ ಗೆಲುವನ್ನು ಪಡೆದ ಟೀಮ್ ಇದಾಗಿದೆ.
ಈಗ ಕಿಚ್ಚ ಕರ್ನಾಟಕ ಪ್ರಿಮಿಯರ್ ಲೀಗ್ ನಲ್ಲಿ ಭಾಗವಹಿಸುವ ಆಸಕ್ತಿ ತೋರುತ್ತಿದ್ದಾರೆ. ಈವರೆಗೂ ಸಿಸಿಎಲ್ ಮೂಲಕ ಆಡಿದ್ದ ಕಿಚ್ಚ ಇನ್ನು ಮುಂದೆ ಕೆಪಿಎಲ್ ಟಿ20 ಮೂಲಕ ತಮ್ಮ ಪ್ರತಿಭೆ ತೋರಲಿದ್ದಾರೆ. ಈ ಕೆಪಿಎಲ್ ತಂಡ ಮೈಸೂರು ಮಹಾರಾಜ ಶ್ರೀಕಂಠದತ್ತರ ಅತ್ಯಂತ ಪ್ರೀತಿಯ ತಂಡವಾಗಿದೆ. ಈ ಬಾರಿ ಈ ತಂಡದಲ್ಲಿ ಕಲಾವಿದರು ಸಹ ಭಾಗವಹಿಸುತ್ತಿದ್ದಾರೆ.
ಆ ಮುಖಾಂತರ ಹೊಸ ಪರಂಪರೆಯನ್ನು ಹುಟ್ಟುಹಾಕುತ್ತಿದ್ದಾರೆ ಕಿಚ್ಚ.ಮೊಟ್ಟಮೊದಲ ಬಾರಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ. ಈ ತಿಂಗಳು 23 ರಂದು ಆಟಗಳು ನಡೆಯಲಿವೆ. ಅದರಲ್ಲಿ ಕಲಾವಿದರು ಸಹ ಭಾಗವಹಿಸಲಿದ್ದಾರೆ. ಈ ಕ್ರೆಡಿಟ್ ಹೋಗೋದು ಕಿಚ್ಚ ಸುದೀಪ್ ಅವರಿಗೆ! ಬದುಕಲ್ಲಿ ಹೊಸದರತ್ತ ಸದಾ ಕೈಚಾಚುವ ಕಿಚ್ಚ ಅವರ ಭಿನ್ನತೆಯು ಇಲ್ಲಿಯೂ ಸಹ ಸಾಬೀತಾಗಿದೆ.