ಕಾಲಿವುಡ್ ನಲ್ಲಿ ರಜನಿಕಾಂತ್ ಸೂಪರ್ ಸ್ಟಾರ್. ಅದೇರೀತಿ ಅವರು ಅಲ್ಲಿನ ಮುಖ್ಯ ಮಂತ್ರಿ ಜಯಲಲಿತಾ ಅವರ ಜೊತೆ ಕೋಲ್ಡ್ ವಾರ ಆಗ್ತಾ ಇದೆ. ಈ ಸಂಗತಿಎಲ್ಲರಿಗೋ ತಿಳಿದಿದೆ. ಅಲ್ಲಿ ಪ್ರಾಬಲ್ಯದಲ್ಲಿ ಇರೋದು ಎರಡೇ ಪಾರ್ಟಿ.
ಒಂದು ಕರುಣಾನಿಧಿಯದ್ದು, ಮತ್ತೊಂದು ಜಯಲಲಿತಾ. ಆದ್ದರಿಂದ ಕಾಲಿವುಡ್ ನವರು ಯಾವ ಪಕ್ಷಕ್ಕೆ ಬೆಂಬಲ ತೋರಿಸಿದರು, ಮತ್ತೊಂದು ಪಕ್ಷದ ಕೆಂಗಣ್ಣಿಗೆ ಗುರಿ ಆಗಬೇಕು.
ಆದ್ದರಿಂದ ಸಾಮಾನ್ಯವಾಗಿ ಜಯಲಲಿತಾ ಅವರ ಕೋಪ ಬರುವಂತಹ ಕೆಲಸ ಅವರೆಂದಿಗೂ ಮಾಡುವುದಿಲ್ಲ.
ಅಮ್ಮನ ಕೋಪಕ್ಕೆ ಗುರಿಯಾದರೆ ಪರಿಣಾಮ ಸರಿ ಇರೋಲ್ಲ ಎನ್ನುವ ಸಂಗತಿಯನ್ನು ಕಮಲ್ ಹಾಸನ್ ತನ್ನ ವಿಶ್ವರೂಪಂ ಸಿನಿಮಾದ ಬಿಡುಗಡೆಯ ಸಮಯದಲ್ಲಿ ನರಕ ಅನುಭವಿಸಿದ್ದರು. ಇತ್ತೀಚೆಗೆ ಧನುಶ್ ಅವರು ಕಟ್ಟುತ್ತಿರುವ ಮನೆಯನ್ನು ಜಯಲಲಿತಾ ಸರ್ಕಾರ ಕೊಡವಿದೆ.
.........ಇನ್ನು ಇದೆ. ಮುಂದೆ ಓದಿ.
ಧನುಶ್ ಕಟ್ಟುತ್ತಿರುವ ಮನೆಗೆ ಪರ್ಮಿಶನ್ ಇಲ್ಲದ ಕಾರಣ ಮನೆಯನ್ನು ಯಾವುದೇ ರೀತಿಯ ಮಾಹಿತಿ ನೀಡದೆ ಕೆಡವಿದ್ದಾರೆ. ಧನುಶ್ ಹುಟ್ಟಿದ ದಿನದಂದು ಈ ಒಂದು ಸಂಗತಿ ನಡೆದಿದೆ.
ಇದನ್ನು ರಜನಿಕಾಂತ್ ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರಂತೆ. ಕನಿಷ್ಠ ಒಂದು ಮಾಹಿತಿ ನೀಡದೆ ಈ ರೀತಿ ಮನೆಯನ್ನು ಕೆಡವಿದ್ದರ ಬಗ್ಗೆ ಅವರಿಗೆ ಸಿಟ್ಟು ಬಂದಿದೆಯಂತೆ.
ಈ ಮನೆಗೆ ಸಂಬಂಧಪಟ್ಟ ಪರ್ಮಿಶನ್ ಸಂಗತಿ ಸಧ್ಯಕ್ಕೆ ಪೆಂಡಿಂಗ್ ನಲ್ಲಿ ಇರುವಾಗ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ಅಂಶವು ರಜನಿಯನ್ನು ಕೆರಳಿದೆ. ಈ ವಿಷಯದ ಬಗ್ಗೆ ರಜನಿಕಾಂತ್ ಅವರು ಯಾವರೀತಿಯ ನಡೆ ಇಡುತ್ತಾರೋ ಎನ್ನುವುದರ ಬಗ್ಗೆ ಅವರ ಅಭಿಮಾನಿಗಳಲ್ಲಿ ಮೂಡಿರುವ ಕುತೂಹಲ ! ನಮಗೂ ಅಷ್ಟೇ!!