Select Your Language

Notifications

webdunia
webdunia
webdunia
webdunia

ಸುದೀಪ್ ಅತ್ತೆಮನೆ ಕಥೆ ಮುಹೂರ್ತ ನಡೆಯಿತು.. ಮುಂದಿನ ಕಥೆ ಹೈದರಾಬಾದ್ ನಲ್ಲಿ

ಸುದೀಪ್ ಅತ್ತೆಮನೆ ಕಥೆ ಮುಹೂರ್ತ  ನಡೆಯಿತು.. ಮುಂದಿನ ಕಥೆ ಹೈದರಾಬಾದ್ ನಲ್ಲಿ
ಬೆಂಗಳೂರು , ಶುಕ್ರವಾರ, 1 ಆಗಸ್ಟ್ 2014 (10:09 IST)
ಕಿಚ್ಚ ಸುದೀಪ್ ಅವರು ಬಹುನಿರೀಕ್ಷೆಯ ಚಿತ್ರ  ಅತ್ತಾರಿಂಟಿಕಿ ದಾರೇದಿ ತೆಲುಗು ಚಿತ್ರದ ಕನ್ನಡ ಅವತರಣಿಕೆ. ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಿತ್ತು. ಹೀರೋಯಿನ್ ಗಳ ಆಯ್ಕೆ, ಆ ಹೀರೋಯಿನ್ ಗಳ  ಕಥೆ, ಹೀಗೆ ಹತ್ತು ಹಲವಾರು. ಅಂತಿಮವಾಗಿ ಈಗ ಎಲ್ಲವು ಸಿದ್ಧವಾಗಿದ್ದು ಮುಹೂರ್ತವು ಸಹಿತ ನಡೆದಿದೆ. 
 
ಬುಧವಾರ  ಬೆಂಗಳೂರು ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಇರುವ ಗಣಪತಿ ದೇಗುಲದಲ್ಲಿ  ಕಿಚ್ಚ ಅವರ ಈ ಚಿತ್ರವು ಮುಹೂರ್ತ ನೆರವೇರಿಸಿ ಕೊಂಡಿತು. ಅಲ್ಲಿಗೆ ನಿರ್ದೇಶಕ ನಂದಕಿಶೋರ್, ಸುದೀಪ್, ಕೋಚ್ ಅನಿಲ್, ಯೋಗೀಶ್ ದ್ವಾರ್ಕೀಶ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಹೈದರಾಬಾದ್ ನಲ್ಲಿ ನೆರವೇರಲಿದೆ. ಪ್ರಕಾಶ್ ರಾಜ್ , ದೇವರಾಜ್ ಸೇರಿದಂತೆ ಅನೇಕ ಪ್ರಸಿದ್ಧರ ತಂಡವೇ ಈ ಚಿತ್ರದಲ್ಲಿದೆ.
 
.........ಇನ್ನು ಇದೆ. ಮುಂದೆ ಓದಿ. 
 
 

ನಿಮಿಷಾಂಬ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಮಗಳು ದೀಪಿಕ ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಂದ್ರ ಶೇಖರ್ ಮಗ ಉದಯ ಚಂದ್ರ ಶೇಖರ್ ಕ್ಯಾಮರ ಸ್ವಿಚ್ ಆನ್ ಮಾಡಿದರು.ಹರಿಪ್ರಿಯ ಮತ್ತು ರಚಿತ ರಾಮ್ ಹೀರೋಯಿನ್ ಗಳಾಗಿದ್ದಾರೆ. 
 
ಮಿರ್ಚಿಯನ್ನು ಮಾಣಿಕ್ಯ ಮಾಡಿ ಆ ಚಿತ್ರವನ್ನು  ಸೂಪರ್ ಡೂಪರ್ ಹಿಟ್ ಮಾಡಿದ ಕಿಚ್ಚ ಈಗ ತಮ್ಮ ಹೊಸ ಚಿತ್ರದ ಮುಖಾಂತರ ಹಂಗಾಮ ನಡೆಸಲು ಸಿದ್ಧ ಆಗಿದ್ದಾರೆ. ಅತ್ತೆ ಮನೆದಾರಿಯತ್ತ ಹೊರಟಿದ್ದಾರೆ ಕಿಚ್ಚ. 

Share this Story:

Follow Webdunia kannada