ಕಿಚ್ಚ ಸುದೀಪ್ ಅವರು ಬಹುನಿರೀಕ್ಷೆಯ ಚಿತ್ರ ಅತ್ತಾರಿಂಟಿಕಿ ದಾರೇದಿ ತೆಲುಗು ಚಿತ್ರದ ಕನ್ನಡ ಅವತರಣಿಕೆ. ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಗಳು ಸದ್ದು ಮಾಡುತ್ತಿತ್ತು. ಹೀರೋಯಿನ್ ಗಳ ಆಯ್ಕೆ, ಆ ಹೀರೋಯಿನ್ ಗಳ ಕಥೆ, ಹೀಗೆ ಹತ್ತು ಹಲವಾರು. ಅಂತಿಮವಾಗಿ ಈಗ ಎಲ್ಲವು ಸಿದ್ಧವಾಗಿದ್ದು ಮುಹೂರ್ತವು ಸಹಿತ ನಡೆದಿದೆ.
ಬುಧವಾರ ಬೆಂಗಳೂರು ನಗರದ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿ ಇರುವ ಗಣಪತಿ ದೇಗುಲದಲ್ಲಿ ಕಿಚ್ಚ ಅವರ ಈ ಚಿತ್ರವು ಮುಹೂರ್ತ ನೆರವೇರಿಸಿ ಕೊಂಡಿತು. ಅಲ್ಲಿಗೆ ನಿರ್ದೇಶಕ ನಂದಕಿಶೋರ್, ಸುದೀಪ್, ಕೋಚ್ ಅನಿಲ್, ಯೋಗೀಶ್ ದ್ವಾರ್ಕೀಶ್ ಅವರ ಸಮ್ಮುಖದಲ್ಲಿ ನಡೆಯಿತು. ಈ ಚಿತ್ರದ ಚಿತ್ರೀಕರಣ ಇಂದಿನಿಂದ ಹೈದರಾಬಾದ್ ನಲ್ಲಿ ನೆರವೇರಲಿದೆ. ಪ್ರಕಾಶ್ ರಾಜ್ , ದೇವರಾಜ್ ಸೇರಿದಂತೆ ಅನೇಕ ಪ್ರಸಿದ್ಧರ ತಂಡವೇ ಈ ಚಿತ್ರದಲ್ಲಿದೆ.
.........ಇನ್ನು ಇದೆ. ಮುಂದೆ ಓದಿ.
ನಿಮಿಷಾಂಬ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರ ಮಗಳು ದೀಪಿಕ ಚಿತ್ರಕ್ಕೆ ಕ್ಲಾಪ್ ಮಾಡಿದರು. ಚಂದ್ರ ಶೇಖರ್ ಮಗ ಉದಯ ಚಂದ್ರ ಶೇಖರ್ ಕ್ಯಾಮರ ಸ್ವಿಚ್ ಆನ್ ಮಾಡಿದರು.ಹರಿಪ್ರಿಯ ಮತ್ತು ರಚಿತ ರಾಮ್ ಹೀರೋಯಿನ್ ಗಳಾಗಿದ್ದಾರೆ.
ಮಿರ್ಚಿಯನ್ನು ಮಾಣಿಕ್ಯ ಮಾಡಿ ಆ ಚಿತ್ರವನ್ನು ಸೂಪರ್ ಡೂಪರ್ ಹಿಟ್ ಮಾಡಿದ ಕಿಚ್ಚ ಈಗ ತಮ್ಮ ಹೊಸ ಚಿತ್ರದ ಮುಖಾಂತರ ಹಂಗಾಮ ನಡೆಸಲು ಸಿದ್ಧ ಆಗಿದ್ದಾರೆ. ಅತ್ತೆ ಮನೆದಾರಿಯತ್ತ ಹೊರಟಿದ್ದಾರೆ ಕಿಚ್ಚ.