Select Your Language

Notifications

webdunia
webdunia
webdunia
webdunia

ಶ್ರಾವಣದ ಸಂಭ್ರಮ ಹೆಚ್ಚಿಸಲು ಆರ್ಯನ್ ಸಿದ್ಧ ..ಇಂದು ಆರ್ಯನ್ ಅಬ್ಬರ ಎಲ್ಲೆಲ್ಲು..

ಶ್ರಾವಣದ ಸಂಭ್ರಮ ಹೆಚ್ಚಿಸಲು  ಆರ್ಯನ್ ಸಿದ್ಧ  ..ಇಂದು ಆರ್ಯನ್ ಅಬ್ಬರ ಎಲ್ಲೆಲ್ಲು..
ಬೆಂಗಳೂರು , ಶುಕ್ರವಾರ, 1 ಆಗಸ್ಟ್ 2014 (10:01 IST)
ಡಿ.ರಾಜೇಂದ್ರಬಾಬು ನಿರ್ದೇಶನದ ಈ ಚಿತ್ರದ ನಾಯಕರಾಗಿ ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಅಭಿನಯಿಸಿರುವ ಆರ್ಯನ್ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.   ಡ್ರೀಂವೀವರ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಧ್ರುವದಾಸ್ ಹಾಗೂ ಡಿ.ಕಮರ್ ಅವರು ನಿರ್ಮಿಸಿರುವ ಆರ್ಯನ್ ಚಿತ್ರ ಬಿಡುಗಡೆಯ ಸಂಭ್ರಮದಲ್ಲಿದೆ.ಚಂದ್ರಶೇಖರ್ ಅವರ ಛಾಯಾಗ್ರಹಣ ಮತ್ತು ಪಿ.ಆರ್.ಸೌಂದರ್ ರಾಜ್ ಅವರ   ಸಂಕಲನವಿರುವ ಈ ಚಿತ್ರಕ್ಕೆ  ಜೆಸ್ಸಿಗಿಫ್ಟ್ ಸಂಗೀತ  ನಿರ್ದೇಶನವಿದೆ. 
 
ಆರ್ಯನ್ ಚಿತ್ರದ ಹಾಡುಗಳನ್ನು ಜಯಂತಕಾಯ್ಕಿಣಿ, ಕವಿರಾಜ್, ಯೋಗರಾಜಭಟ್, ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಹರ್ಷ, ಆದಿಲ್ ಶೇಖ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಗಣೇಶ್ ಸಾಹಸ ನಿರ್ದೇಶನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.ಸೆಂಚುರಿ ಸ್ಟಾರ್  ಶಿವರಾಜ್ ಕುಮಾರ್ ,  ರಮ್ಯ, ಶರತ್  ಬಾಬು, ಬುಲೆಟ್ ಪ್ರಕಾಶ್, ರಘುಮುಖರ್ಜಿ, ವಿನಯಾಪ್ರಸಾದ್, ಅರ್ಚನಾಗುಪ್ತ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

Share this Story:

Follow Webdunia kannada