ಕನ್ನಡ ಚಿತ್ರರಂಗದಲ್ಲಿ ತನಗೊಂದು ಸ್ಥಾನ ಪಡೆದ ಮುಂಬೈ ಮೂಲದ ಹೀರೋ ಧ್ಯಾನ್. ನನ್ನ ಪ್ರೀತಿಯ ಹುಡುಗಿ, ಮೊನಲೀಸ, ಅಮೃತದ ಧಾರೆ ಚಿತ್ರಗಳ ಮುಖಾಂತರ ಮನಗೆದ್ದಿದ್ದ ಚಾಕೊಲೆಟ್ ಹೀರೋ ಸಮೀರ್ ದತ್ತಾನಿ ಯಾನೆ ಧ್ಯಾನ್ 2010 ರಲ್ಲಿ ಹುಡುಗ ಹುಡುಗಿ ಚಿತ್ರದ ನಂತರ ಕನ್ನಡ ಚಿತ್ರರಂಗದ ಬಳಿ ಬಂದಿರಲಿಲ್ಲ. ಆ ಸಿನಿಮ ಹೇಳಲಾಗದಷ್ಟು ಕೆಟ್ಟದಾಗಿ ಸೋತು ಮಕಾಡೆ ಮಲಗಿತ್ತು. ಈಗ ಮತ್ತೆ ಧ್ಯಾನ್ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನಾವು ಹೊಸದೊಂದು ಉದ್ಯಮದತ್ತ ಗಮನ ಕೊಟ್ಟಿದ್ದೆವು. ನಮ್ಮದು ಔದ್ಯಮಿಕ ಕುಟುಂಬ. ಹೊಸದೊಂದು ಫ್ಯಾಕ್ಟರಿ ವಿಷಯದಲ್ಲಿ ಸಾಕಷ್ಟು ಬ್ಯುಸಿ ಆಗಿದ್ದೆ. ಈಗ ಕೆಲಸಗಳು ಒಂದು ಹದಕ್ಕೆ ಬಂದಿದೆ. ಆದ ಕಾರಣ ಕನ್ನಡ ಚಿತ್ರದಲ್ಲಿ ನಟಿಸಲು ಬಂದಿದ್ದೇನೆ ಎಂದು ಹೇಳಿದ್ದಾರೆ.
.........ಇನ್ನು ಇದೆ. ಮುಂದೆ ಓದಿ.
ಯಶ್ ಮಾತು ರಾಧಿಕ ಪಂಡಿತ್ ಅವರ ಅಭಿನಯದ ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಬೆಂಗಳೂರು ನನ್ನ ಎರಡನೇ ಮನೆ. ಕನ್ನಡಿಗರು ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ನಂಬಿಕೆ ಉಳಿಸುವುದು ನನ್ನ ಕೆಲಸ ಎಂದಿದ್ದಾರೆ ಧ್ಯಾನ್.