Webdunia - Bharat's app for daily news and videos

Install App

ರುದ್ರಮದೇವಿ ಚಿನ್ನ ಕಳ್ಳತನದ ಮುಂದಿನ ಭಾಗ!

Webdunia
ಸೋಮವಾರ, 28 ಜುಲೈ 2014 (09:37 IST)
ಟಾಲಿವುಡ್ ಸಿನಿಮಾರಂಗದಲ್ಲಿ ಅತ್ಯಂತ  ನಿರೀಕ್ಷೆ ಹೊಂದಿರುವ ಚಿತ್ರ ರಾಣಿ ರುದ್ರಮದೇವಿ. ಈ ಚಿತ್ರದಲ್ಲಿ ಅನುಷ್ಕ ಧರಿಸಿದ್ದ ಒಡವೆಗಳು ಸುಮಾರು ಹತ್ತು ಕೆಜಿಗಳಷ್ಟು  ಬೆಲೆ ಬಾಳುವಂತಹವು ಇತ್ತೀಚಿಗೆ ಕಳುವಾಯಿತು.
 
 ಆಕೆ ಧರಿಸಿದ್ದ ಈ ಒಡವೆಗಳ ಕಳುವು ಶೂಟಿಂಗ್ ತಾಣದಲ್ಲಿ ಸಾಕಷ್ಟು ಗದ್ದಲ ಎಬ್ಬಿಸಿತ್ತು. ಇದು ನಾನಕ್ರಾಮ್  ಗೂಡಾದಲ್ಲಿ   ರುದ್ರಮ ದೇವಿ ಸೆಟ್ ನಲ್ಲಿ ನಡೆಯಿತು. ಈ ಕಳ್ಳತನ ನಡೆದ ಆಭರಣಗಳಲ್ಲಿ   ಅತ್ಯಂತ ಬೆಲೆಬಾಳುವ ಚಿನ್ನ ಬೆಳ್ಳಿ ಒಡವೆಗಳು ಇದ್ದು  ಈ  ಕಳುವಿನ ಬಗ್ಗೆ    ನಿರ್ದೇಶಕ ಗುಣಶೇಖರ್ ರಾಯದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈಗ ರಾಯದುರ್ಗ ಪೊಲೀಸರು ಒಂದು ಒಳ್ಳೆಯ ಕ್ಲೂ ಕಂಡು ಹಿಡಿದಿದ್ದಾರೆ .
 
..........ಇನ್ನು ಇದೆ. ಮುಂದೆ ಓದಿ. 
 
 

ಈ ಹತ್ತು ಕೆಜಿ ಒಡವೆಗಳು ಈಗ ಆಂಜನೇಯ ಶೆಟ್ಟಿ ಗೋಲ್ಡ್ ಮೇಕರ್ಸ್ ಕಂಪನಿಯ ಎಗ್ಜಿಕ್ಯೂಟಿವ್ ಆಗಿರುವ ರವಿ ಸುಬ್ರಮಣ್ಯಂ  ಅವರ ಮನೆಯಲ್ಲಿ ದೊರಕಿವೆ. ರವಿ ಅವರು ಹೇಳುತ್ತಿರುವ ಉತ್ತರ ಪೊಲೀಸರಿಗೆ ನಂಬಿಕೆ ತರಿಸಿಲ್ಲ. 
 
ಆದ್ದರಿಂದ ಅವರು ಆರಂಭದಲ್ಲೇ ರವಿಯನ್ನು ತಮ್ಮ ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಸ್ವಲ್ಪ ದಿನದಲ್ಲೇ ಈ ಕೇಸ್ ಗೆ ಸಂಬಂಧಪಟ್ಟಂತೆ ಅಡಗಿರುವ ರಹಸ್ಯ ಹೊರ ತೆಗೆಯುವುದಾಗಿ ಆಶ್ವಾಸನೆ ನೀಡಿದ್ದಾರೆ ಪೊಲೀಸರು. ನೀತಾಲುಲ್ಲ ಈ ಚಿತ್ರದ ಆಭರಣಗಳನ್ನು ಡಿಜೈನ್ ಮಾಡಿದ್ದಾರೆ. ರಿಯಾಲಿಟಿಗಾಗಿ  ಚಿನ್ನ -ಬೆಳ್ಳಿ ಒಡವೆಗಳನ್ನು ಬಳಕೆಯ ನಿರ್ಧಾರ ತೆಗೆದುಕೊಂಡ   ಚಿತ್ರತಂಡ ಈಗ ಅತಿ ದೊಡ್ಡ ರಿಸ್ಕ್ ನಲ್ಲಿ ಸಿಕ್ಕಿ ಹಾಕಿಕೊಂಡಿದೆ ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments