Select Your Language

Notifications

webdunia
webdunia
webdunia
webdunia

ನೀರ್ದೋಸೆ ಕೆಲಸ ನಡೀತಾ ಇದೆ-ಜಗ್ಗೇಶ್

ನೀರ್ದೋಸೆ  ಕೆಲಸ ನಡೀತಾ ಇದೆ-ಜಗ್ಗೇಶ್
ಬೆಂಗಳೂರು , ಶುಕ್ರವಾರ, 25 ಜುಲೈ 2014 (10:00 IST)
ಸಾಕಷ್ಟು ಗದ್ದಲ ಮಾಡುತ್ತಿರುವ ಚಿತ್ರ ನೀರ್ದೋಸೆ. ಆರಂಭಿಕ ಹಂತದಿಂದಲೂ ಅದು ಅನೇಕ ರೀತಿಯಲ್ಲಿ ಸದ್ದು ಮಾಡಿತ್ತು. ರಮ್ಯ ಮತ್ತು ಜಗ್ಗೇಶ್ ಅವರ ನಟನೆಯಲ್ಲಿ ತಯಾರಾಗುತ್ತಿರುವ ಚಿತ್ರವು ಒಂದಲ್ಲ ಒಂದು ಕಾರಣದಿಂದ ಸುದ್ದಿ ಮಾಡುತ್ತಲೇ ಬಂದಿತ್ತು. ಇತ್ತಿಚೆಗೆ ರಮ್ಯ ಚುನಾವಣೆಯಲ್ಲಿ ಸೋತು ಆಯ್ತು, ಆರ್ಯನ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಆಯ್ತು. ಆ ಚಿತ್ರವೀಗ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಈಗ ಮತ್ತೆ ಜಗ್ಗೇಶ್ ಅವರು ನೀರ್ದೊಸೆಯನ್ನು ಹೆಂಚಿನ ಮೇಲೆ ಹಾಕಲು ಸಿದ್ಧತೆ ನಡಿಸಿದ್ದಾರೆ. 
 
ನೀರ್ದೋಸೆ ಶೂಟಿಂಗ್ ಆಗೋಗಿದೆ. ಸದ್ಯಕ್ಕೆ ಎಡಿಟಿಂಗ್ ನಡೀತಾ ಇದೆ. 75 ವರ್ಷಗಳಿಂದ ಕನ್ನಡ ಚಿತ್ರರಂಗ ಓಡ್ತಾನೇ ಇದೆ. ಇಲ್ಲಿ ಎಷ್ಟೋ ಮಂದಿ ಬರ್ತಾರೆ, ಇರ್ತಾರೆ ಮತ್ತೆ ಹೋಗ್ತಾರೆ. ಹಾಗಂತ ಚಿತ್ರರಂಗ ನಿಂತಿದೆಯಾ? ಈ ಕಲಾಲೋಕದ ಅವಕಾಶ ಪಡೆಯೋಕೆ ತುಂಬಾನೇ ಅದೃಷ್ಟ ಮಾಡಿರಬೇಕು. 
 
 
ಯಾರಿಗೂ ಇಂತಹ ಸೇವೆ ಮಾಡೋಕೆ ಸುಲಭವಾಗಿ ಜಾಗ ಸಿಗುವುದಿಲ್ಲ. ದೊರೆತ ಅವಕಾಶವನ್ನು ಆಪ್ತವಾಗಿ ಒಪ್ಪಿ ಅಪ್ಪಿ ಬೆಳಸ ಬೇಕು ಎನ್ನುವ ಮಾಮ್ತನ್ನು ಹೇಳಿದ್ದಾರೆ ಜಗ್ಗೇಶ್ . ಆರಂಭದಲ್ಲಿ ಇರುವ ಉತ್ಸಾಹ ಕೆಲವು ಸಿನಿಮಾಗಳು ಕಳೆದುಕೊಂಡು ಬಿಡುತ್ತದೆ. ಹಾಗೆಂದು ಬೇರೆ ಚಿತ್ರಗಳು ಮುಂದುವರೆಯುವುದೇ ಇಲ್ಲವೇ? 
 
........ಇನ್ನು ಇದೆ. ಮುಂದೆ ಓದಿ. 
 
 

ನೀರ್ದೋಸೆಯಿಂದ ಹೊರ ಹೋದವರು ಸುಮಾರು 28 ಮೇಜರ್ ಸೀನ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಡಲ್ಲೂ ಇದ್ದಾರೆ.  ಪ್ರಾಯಶಃ ಆರು ದಿನ ಶೂಟಿಂಗ್ ನಡೆದಿದ್ದರೆ, ಎಲ್ಲವೂ ಮುಗಿದು ಹೋಗುತ್ತಿತ್ತು.  
 
ಸ್ವಾಭಿಮಾನಿಗಳು ಬೇರೆಯವರಿಗೆ ಎಂದಿಗೂ ತೊಂದರೆ ಕೊಡಲ್ಲ ಎಂದು ಹೇಳುವುದರ ಮುಖಾಂತರ ನವರಸ ನಾಯಕ ಜಗ್ಗೇಶ್ ನವರಸಗಳಲ್ಲಿ ಒಂದಾಗಿರುವ ಕೋಪವನ್ನು ವ್ಯಕ್ತ ಪಡಿಸಿದ್ದಾರೆ. ಸೊ ನೀರ್ದೋಸೆ ಬಗ್ಗೆ ಚಿಂತೆ ಮಾಡದೆ ಅದು ಬರುವ ತನಕ ಕಾಯೋಣ ಅಂತಿದ್ದಾರೆ ಜಗ್ಗೇಶ್ ಅಭಿಮಾನಿಗಳು!

Share this Story:

Follow Webdunia kannada