Select Your Language

Notifications

webdunia
webdunia
webdunia
webdunia

ಸಮಂತ ಕೋಪಕ್ಕೆ ಕಾರಣ ಏನು.. ಅಂದು ಆದದ್ದಾದರೂ ಏನು?

ಸಮಂತ ಕೋಪಕ್ಕೆ ಕಾರಣ ಏನು.. ಅಂದು ಆದದ್ದಾದರೂ ಏನು?
ಹೈದ್ರಾಬಾದ , ಶುಕ್ರವಾರ, 25 ಜುಲೈ 2014 (09:52 IST)
ಕಾಲಿವುಡ್ ಚಿತ್ರರಂಗದಲ್ಲಿ ಅನೇಕ ಸ್ಟಾರ್ ಹೀರೋಗಳ ಜೊತೆಗೆ ನಟಿಸುವ ಅವಕಾಶ ಪಡೆದ ನಟಿ ಸಮಂತ ಋತು. ಈಗ ಆಕೆಯ ವಿಷಯ ಕಾಲಿವುಡ್ ನ ಹಾಟೆಸ್ಟ್ ಟಾಪಿಕ್ ಆಗಿ ಬದಲಾಗಿದೆ. ಇದಕ್ಕೆ ಕಾರಣ ಆಕೆ ಮಾಡಿದ ಟ್ವೀಟ್. ಇದು ಎರಡು ಮೂರು ದಿನಗಳ ಹಿಂದೆ ನಡೆದ ಸಂಗತಿ. ಅಂದು ಆಕೆ  ಟ್ವೀಟ್ ಮಾಡಿದ್ದು ... ನನಗೆ ಈ ದಿನ ನನ್ನ ಬದುಕಲ್ಲಿ ಮರೆಯಲಾಗದಂತಹ ದಿನವಾಗಿದೆ. ಅತ್ಯಂತ ಕೆಟ್ಟ ದಾಗಿತ್ತು. ನಾನು ಫ್ಲೈಟ್ ಬದಲಾಯಿಸುವಾಗ ನನ್ನ ಬ್ಯಾಗ್ ಕಳುವಾಯಿತು. ಅಲ್ಲದೆ ಫ್ಲೈಟ್ ಗೆ ಸಹ ಲೇಟ್ ಆಯಿತು. 
 
ಅಲ್ಲದೆ ಅದಕ್ಕೆ ಪೂರಕವಾಗಿ ಫುಡ್ ಪಾಯ್ಸನ್ ಆಯಿತು. ಆದ್ದರಿಂದ ನಾನು ಅಂಜಾನ್ ಚಿತ್ರದ ಆಡಿಯೋ ಕಾರ್ಯಕ್ರಮಕ್ಕೆ ಬರುತ್ತಿಲ್ಲ! ಇದು ಅಲ್ಲಿನ ಮಾಧ್ಯಮಗಳಿಗೆ ಸಕತ್ ವಿಷಯ ಆಗಿತ್ತು. ಈಕೆ ಬೇಕೂ ಬೇಕೆಂದೇ ಆಡಿಯೋ ಕಾರ್ಯಕ್ರಮಕ್ಕೆ ಬಂದಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿವೆ ಕಾಲಿವುಡ್ ಮಾಧ್ಯಮಗಳು. 
 
........ಇನ್ನು ಇದೆ. ಮುಂದೆ ಓದಿ. 
 
 

ಸಮಂತ ಇಂತಹ ನಿರ್ಧಾರಕ್ಕೆ ಬರುವ ಹಿಂದೆ ಕಾರಣ ಇದೆಯಂತೆ ಅಲ್ಲಿನವರ ಪ್ರಕಾರ ಅಂಜಾನ್ ಚಿತ್ರದ ಪ್ರಮೋಶನ್ ನಲ್ಲಿ ಹೀರೋ ಸೂರ್ಯ ಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರಂತೆ ಚಿತ್ರತಂಡ. ಅಲ್ಲದೆ ಪೋಸ್ಟರ್ ಗಲ್ಲಿ ಆಕೆಯ ಚಿತ್ರಗಳನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಬಳಸಿಕೊಂಡಿದ್ದಾರೆ. 
 
ಇನ್ನು ಅಂಶವು ಸಹ ಆಕೆಯಲ್ಲಿ ಸಿಟ್ಟು ಉಂಟು ಮಾಡಿದೆ ಎನ್ನುವ ಸಂಗತಿಯನ್ನು ಅಲ್ಲಿನ ಮಾಧ್ಯಮಿಗಳು ಬರೆದಿದ್ದಾರೆ ಮತ್ತು ತಿಳಿಸಿದ್ದಾರೆ. ಆದರೆ ಈ ಪ್ರಕರಣ ಹೇಗೆ ಬಗೆ ಹರಿಯುತ್ತೋ ಅನ್ನುವ ಕುತೂಹಲ ಎಲ್ಲರಂತೆ ನಮಗೂ ಇದೆ!

Share this Story:

Follow Webdunia kannada