Select Your Language

Notifications

webdunia
webdunia
webdunia
webdunia

ಜೀ ಕನ್ನಡ ವಾಹಿನಿಯಲ್ಲಿ ರಮೇಶ್ ಅರವಿಂದ್ ಟಾಕ್ ಷೋ

ಜೀ ಕನ್ನಡ ವಾಹಿನಿಯಲ್ಲಿ ರಮೇಶ್ ಅರವಿಂದ್ ಟಾಕ್ ಷೋ
ಬೆಂಗಳೂರು , ಗುರುವಾರ, 24 ಜುಲೈ 2014 (09:54 IST)
ನಟ-ನಿರ್ದೇಶಕ ರಮೇಶ್ ಅರವಿಂದ್ ಅತ್ಯುತ್ತಮ ನಿರೂಪಕ ಎನ್ನುವ ಅಗ್ಗಳಿಕೆ ಹೊಂದಿರುವ ಪ್ರತಿಭೆ ರಮೇಶ್ ಅರವಿಂದ್ . ಕಸ್ತೂರಿಗಾಗಿ ಪ್ರೀತಿಯಿಂದ ರಮೇಶ್,  ಈಟಿವಿಗಾಗಿ ರಾಜ ರಾಣಿ ರಮೇಶ್ ಎನ್ನುವ  ರಿಯಾಲಿಟಿ ಶೋಗಳ ಮುಖಾಂತರ ಜನಮನ ಗೆದ್ದಿದ್ದ ರಮೇಶ್ ಈಗ  ಜೀ ಟಿವಿಗಾಗಿ ವಿಕೆಂಡ್ ವಿತ್  ರಮೇಶ್ ಎಂಬ ಹೊಸ ಟಾಕ್ ಶೋ ನಡೆಸಿಕೊಡುತ್ತಿದ್ದಾರೆ. 
 
ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10ಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಇದು ಸೆಲೆಬ್ರಿಟಿ ಷೋ ಆಗಿದ್ದು ಅದರಲ್ಲಿ ತಮ್ಮ ಮನದಾಳವನ್ನು ಬಿಚ್ಚಿಡಲಿದ್ದಾರೆ ರಮೇಶ್  ಮುಂದೆ!ಇದು ನಿಮಗೆ ಗೊತ್ತಿರುವ ಸೆಲೆಬ್ರಿಟಿಗಳ ಗೊತ್ತಿಲ್ಲದ ಮುಖ ಎಂಬುದು ರಮೇಶ್ ಅರವಿಂದ್ ಹೇಳಿದ್ದಾರೆ. 
 
.........ಇನ್ನು ಇದೆ. ಮುಂದೆ ಓದಿ. 
 
 

ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಸೆಲೆಬ್ರಿಟಿಗಳನ್ನು ರಮೇಶ್ ಮಾತಾಡಿಸಲಿದ್ದಾರೆ. ಮೊದಲ ಕಂತು ಚಿತ್ರೀಕರಣ ಆಗಿದ್ದು, ಅದರಲ್ಲಿ ಪುನೀತ್ ರಾಜ್ ಕುಮಾರ್ ಆರಂಭಿಕ  ಅತಿಥಿ ಆಗಲಿದ್ದಾರೆ. 
 
 ರಮೇಶ್ ನಿರ್ದೇಶನದ, ಕಮಲ್ ಹಾಸನ್ ಅಭಿನಯದಉತ್ತಮ ವಿಲನ್ ಚಿತ್ರವನ್ನು ಸುಮಾರು 90 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ.ಚಿತ್ರದ  ಕೊನೆಯ ಹಂತದ ಕೆಲಸ ಉಳಿದಿದೆ.  ಇನ್ನೊಂದು ಹಾಡು ಮತ್ತು ಸ್ವಲ್ಪ ಕೆಲಸ ಬಿಟ್ಟರೆ ಸಿನಿಮಾ ನೋಡಲು ಸಿದ್ಧ.  ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಗಿದು ಚಿತ್ರ ಮುಂದಿನ ಮೂರ್ನಾಲ್ಕು ತಿಂಗಳಲ್ಲಿ  ಸಿನಿ ಪ್ರೇಕ್ಷಕರ ಮುಂದೆ ಬರಲಿದೆ ಚಿತ್ರ!

Share this Story:

Follow Webdunia kannada