Webdunia - Bharat's app for daily news and videos

Install App

ರಣವಿಕ್ರಮದಿಂದ ರಚಿತ ರಾಮ್ ಔಟ್ ?

Webdunia
ಬುಧವಾರ, 25 ಜೂನ್ 2014 (09:57 IST)
ಧೀರ ರಣವಿಕ್ರಮ  ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹೊಚ್ಚ ಹೊಸ ಚಿತ್ರ. ಇದರ ಶೂಟಿಂಗ್ ಈಗ ಬಳ್ಳಾರಿಯಲ್ಲಿ ಭರದಿಂದ ಸಾಗಿದೆ. ಈಗ ಈ ಚಿತ್ರಕ್ಕೆ ಸಂಬಂಧಪಟ್ಟ ಸಂಗತಿ ಒಂದು ಹೊರ ಬಂದಿದೆ. ಅದ ರಣವಿಕ್ರಮ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ರಚಿತಾ ರಾಮ್ ಈಗ ಚಿತ್ರತಂಡದಿಂದ ಹೊರಬಂದಿದ್ದಾರೆ.
 
 ಈಗ ಆ ಜಾಗದಲ್ಲಿ  ಹೊಸ ಹುಡುಗಿ ತುಂಬಲು ಕೆಲಸಗಳು ಭರದಿಂದ ಸಾಗಿವೆ.  ಡೇಟ್ಸ್ ಕ್ಲಾಶ್ ಎಂಬ ಕಾರಣ ನೀಡಿ ರಚಿತಾ ಹೊರಬರುತ್ತಿದ್ದಾರೆ. ಈ ರೀತಿ ಈಕೆ ಬರುತ್ತಿರುವ ಎರಡನೇ ಚಿತ್ರವಾಗಿದೆ.  ಈ ಹಿಂದೆ ಯೋಗರಾಜ್ ಭಟ್ಟರ 'ವಾಸ್ತುಪ್ರಕಾರ' ಚಿತ್ರಕ್ಕೂ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ, 'ರಣವಿಕ್ರಮ' ಚಿತ್ರಕ್ಕೆ ಡೇಟ್ ಹೊಂದಿಸಬೇಕೆಂಬ ಕಾರಣ ನೀಡಿ, ವಾಸ್ತುಪ್ರಕಾರದಿಂದ ಹೊರಗೆ ಬಂದಿದ್ದರು.
 
..........ಇನ್ನು ಇದೆ. ಮುಂದೆ ಓದಿ. 
 
 

ಆದರೆ ಈಗ ರಣವಿಕ್ರಮನಿಗೂ ಸಹ ಆಕೆ ಬೇಡವಾಗಿದ್ದಾಳೆ ಅಂದ್ರೆ ಪ್ರಶ್ನೆಗಳು ಮೂಡುವುದು ಸಹಜ. ನಿರ್ಮಾಪಕ ಜಯಣ್ಣ ಮಾತ್ರ ರಚಿತಾ ರಣವಿಕ್ರಮದಿಂದ ಹೊರನಡೆದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಅವರ ಡೇಟ್ಸ್   ನಮ್ಮ ಶೆಡ್ಯೂಲ್ ಗೆ ಹೊಂದಿಕೆ ಆಗದ ಕಾರಣ ಆಕೆಯ ಬದಲಾಗಿ ಬೇರೆಯರನ್ನು ಆಯ್ಕೆ ಮಾಡಿಕೊಳ್ಳುತ್ತಾ ಇದ್ದೇವೆ ಎಂದು ಹೇಳಿದ್ದಾರೆ ಜಯಣ್ಣ. 
 
ರಣವಿಕ್ರಮದಲ್ಲಿ ಇಬ್ಬರು ನಾಯಕಿಯರಿದ್ದು, ಮತ್ತೂಬ್ಬ ನಾಯಕಿ ಅಂಜಲಿ ಬಳ್ಳಾರಿಯಲ್ಲಿ ಚಿತ್ರೀಕರಣದಲ್ಲಿದ್ದಾರೆ. ಬುಲ್ ಬುಲ್ ಮೂಲಕ ಸಿನಿಮಾ ರಂಗಕ್ಕೆ ಬಂದ ರಚಿತ ಗೆಲುವಿನಿಂದ ಹೆಸರು ಮಾಡಿದ್ದರು.  ಈಗ ಹೊರ ಬರುವ ಸಂಗತಿಯಿಂದ ಹೆಚ್ಚು ಹೆಸರು ಮಾಡುತ್ತಿದ್ದಾರೆ.  

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments