Webdunia - Bharat's app for daily news and videos

Install App

ಇಂದು ತೆರೆ ಕಾಣುತ್ತಿರುವ ಮೋಹಕ ನಟ ರಾಜೇಶ್ ಕೃಷ್ಣನ್ ಅವರ ಮೆಲೋಡಿ

Webdunia
ಶುಕ್ರವಾರ, 17 ಏಪ್ರಿಲ್ 2015 (10:47 IST)
ರಾಜೇಶ್ ಕೃಷ್ಣನ್ ಅಭಿನಯದ ಮೆಲೋಡಿ ಚಿತ್ರ ಇಂದು ತೆರೆ ಕಾಣುತ್ತಿದೆ. ಹದಿನಾಲ್ಕು ವರ್ಷಗಳ ಬಳಿಕ ನಿರ್ದೇಶಕ ಬರಹಗಾರ ನಂಜುಂಡ ಅವರು ನಿರ್ದೇಶನ ಮಾಡಿದ ಮೆಲೋಡಿ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಕನಸಲೂ ನೀನೇ ಮನಸಲೂ ನೀನೇ ಇದು ನಂಜುಂಡ ಅವರ ಚೊಚ್ಚಲ ಚಿತ್ರವಾಗಿತ್ತು. ಅದಾದ ಬಳಿಕ ಅವರು ಮೆಲೋಡಿ ಚಿತ್ರದ ಮುಖಾಂತರ ನಿರ್ದೇಶನದತ್ತ ಒಲವನ್ನು ತೋರಿದ್ದಾರೆ. ಈ ಚಿತ್ರ ನರ್ತಕಿ ಸೇರಿದಂತೆ ಹಲವಾರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ. ರಾಜೇಶ್ ಕೃಷ್ಣನ್, ಚೇತನ್ ಗಂಧರ್ವ, ಕಾರ್ತಿಕ್ ಮೆನನ್  ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. 

ಮೆಲೋಡಿ ಕೇವಲ ಸಂಗೀತಕ್ಕೆ ಸಂಬಂಧ ಪಟ್ಟಿದುದಲ್ಲ, ಇದು ಸಂಗೀತಮಯ ಬದುಕಿನ ಕಥಾಹಂದರ ಹೊಂದಿರುವ ಚಿತ್ರ. ಈ ಚಿತ್ರ ಸಾಮಾಜಿಕ ಜಾಲತಾಣದಿಂದ ಎದುರಾಗುವ ಸಮಸ್ಯೆಗಳ ಬಗ್ಗೆ ತಿಳಿಸುತ್ತದೆ. ನಾವು ಇದರಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಕೆಟ್ಟದಾಗಿ ಹೇಳುತ್ತಿಲ್ಲ.  
 
ಆದರೆ ಅಂತಹ ಜಾಲತಾಣಗಳಿಂದ ಉದ್ಭವ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳುವ ಪ್ರಯತ್ನ ಮಾಡುತ್ತಿದ್ದೇವೆ. ಅನೇಕರು ಇಂತಹ ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ ಎಂದಿದ್ದಾರೆ ನಿರ್ದೇಶಕ ನಂಜುಂಡ. ಇದರ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಖುದ್ದು ನಿರ್ದೇಶಕರೇ ಮಾಡಿದ್ದಾರೆ.ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಎಲ್ ಎನ್ ಶಾಸ್ತ್ರಿ ಅವರೇ ಮಾಡಿದ್ದಾರೆ. ಇದರ ಕೊರಿಯಾಗ್ರಫಿಯನ್ನು ನಾಗೇಶ್ವರ್ ರಾವ್ ಅವರು ಮಾಡಿದ್ದಾರೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments