Webdunia - Bharat's app for daily news and videos

Install App

ವಿವಾದದ ಸುಳಿಯಲ್ಲಿ ಮಾಸ್ತಿಗುಡಿ ನಿರ್ದೇಶಕ ನಾಗಶೇಖರ್

Webdunia
ಶನಿವಾರ, 6 ಫೆಬ್ರವರಿ 2016 (10:35 IST)
ಮೈನಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಹುಟ್ಟಿಸಿದ ನಿರ್ದೇಶಕ ನಾಗಶೇಖರ್. ಇದೀಗ ನಾಗಶೇಖರ್ ಮಾಸ್ತಿಗುಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ಸಿನಿಮಾ ಸೆಟ್ಟೇರುತ್ತಿದ್ದಂತೆಯೇ ನಾಗಶೇಖರ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ವಿಷ್ಯಾ ಏನಪ್ಪಾ ಅಂದ್ರೆ ಮಾಸ್ತಿಗುಡಿ ಸಿನಿಮಾದಲ್ಲಿ ನಾಗಶೇಖರ್ ಅವರು  ಸಿ.ಅಶ್ವತ್ಥ್ ಅವರ ಹಾಡನ್ನು ಬಳಸಿಕೊಳ್ಳುತ್ತೇನೆ ಅಂತಿದ್ದಾರೆ.ಆ ಹಾಡನ್ನು ಬರೆದಿರುವ ಗೀತೆ ರಚನಾಕಾರ ಋಷಿ ಅವರು ಮಾತ್ರ ಈ ಹಾಡು ನನ್ನದು ಅಂತಿದ್ದಾರೆ. ನನ್ನ ಅನುಮತಿಯಿಲ್ಲದೇ ಸಿನಿಮಾದಲ್ಲಿ ಹಾಡನ್ನು ಬಳಸಿಕೊಂಡಿದ್ದಾರೆ ಅಂತಾ ಅವರು ಆರೋಪಿಸಿದ್ದಾರೆ. ಮಾಸ್ತಿ ಗುಡಿ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಆದ್ರೆ ಸಿನಿಮಾದಲ್ಲಿ ವಿಜಿ ಪಾತ್ರಕ್ಕೆ ಹೊಂದುವಂತೆ ಈ ಹಾಡನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ.
 
ಸಿ.ಅಶ್ವಥ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಒಳಿತು ಮಾಡು ಮನುಸಾ ಹಾಡನ್ನು ಋಷಿ ತಮ್ಮ ಮರುಭೂಮಿ ಸಿನಿಮಾಗಾಗಿ ಬರೆದಿದ್ರಂತೆ. ಆದರೆ ಯಾವುದೇ ಮುಲಾಜಿಲ್ಲದೇ ನಾಗಶೇಖರ್ ಈ ಹಾಡನ್ನು ಬಳಸಿಕೊಂಡಿದ್ದಾರೆ ಅನ್ನೋದು ಋಷಿ ಅಳಲು. ಈ ಹಿಂದೆ ಮೈನಾ ಸಿನಿಮಾದಲ್ಲಿಯೂ ನಾಗಶೇಖರ್ ಕಾಣದ ಕಡಲಿಗೆ ಹಾಡು ಬಳಸಿಕೊಂಡು ಇದೇ ರೀತಿ ವಿವಾದಕ್ಕೆ ಗುರಿಯಾಗಿದ್ದರು.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments