Select Your Language

Notifications

webdunia
webdunia
webdunia
webdunia

ವಿವಾದದ ಸುಳಿಯಲ್ಲಿ ಮಾಸ್ತಿಗುಡಿ ನಿರ್ದೇಶಕ ನಾಗಶೇಖರ್

ವಿವಾದದ ಸುಳಿಯಲ್ಲಿ ಮಾಸ್ತಿಗುಡಿ ನಿರ್ದೇಶಕ ನಾಗಶೇಖರ್
, ಶನಿವಾರ, 6 ಫೆಬ್ರವರಿ 2016 (10:35 IST)
ಮೈನಾ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಹುಟ್ಟಿಸಿದ ನಿರ್ದೇಶಕ ನಾಗಶೇಖರ್. ಇದೀಗ ನಾಗಶೇಖರ್ ಮಾಸ್ತಿಗುಡಿ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ಸಿನಿಮಾ ಸೆಟ್ಟೇರುತ್ತಿದ್ದಂತೆಯೇ ನಾಗಶೇಖರ್ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ.

ವಿಷ್ಯಾ ಏನಪ್ಪಾ ಅಂದ್ರೆ ಮಾಸ್ತಿಗುಡಿ ಸಿನಿಮಾದಲ್ಲಿ ನಾಗಶೇಖರ್ ಅವರು  ಸಿ.ಅಶ್ವತ್ಥ್ ಅವರ ಹಾಡನ್ನು ಬಳಸಿಕೊಳ್ಳುತ್ತೇನೆ ಅಂತಿದ್ದಾರೆ.ಆ ಹಾಡನ್ನು ಬರೆದಿರುವ ಗೀತೆ ರಚನಾಕಾರ ಋಷಿ ಅವರು ಮಾತ್ರ ಈ ಹಾಡು ನನ್ನದು ಅಂತಿದ್ದಾರೆ. ನನ್ನ ಅನುಮತಿಯಿಲ್ಲದೇ ಸಿನಿಮಾದಲ್ಲಿ ಹಾಡನ್ನು ಬಳಸಿಕೊಂಡಿದ್ದಾರೆ ಅಂತಾ ಅವರು ಆರೋಪಿಸಿದ್ದಾರೆ. ಮಾಸ್ತಿ ಗುಡಿ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಆದ್ರೆ ಸಿನಿಮಾದಲ್ಲಿ ವಿಜಿ ಪಾತ್ರಕ್ಕೆ ಹೊಂದುವಂತೆ ಈ ಹಾಡನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತಂತೆ.
 
ಸಿ.ಅಶ್ವಥ್ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ಒಳಿತು ಮಾಡು ಮನುಸಾ ಹಾಡನ್ನು ಋಷಿ ತಮ್ಮ ಮರುಭೂಮಿ ಸಿನಿಮಾಗಾಗಿ ಬರೆದಿದ್ರಂತೆ. ಆದರೆ ಯಾವುದೇ ಮುಲಾಜಿಲ್ಲದೇ ನಾಗಶೇಖರ್ ಈ ಹಾಡನ್ನು ಬಳಸಿಕೊಂಡಿದ್ದಾರೆ ಅನ್ನೋದು ಋಷಿ ಅಳಲು. ಈ ಹಿಂದೆ ಮೈನಾ ಸಿನಿಮಾದಲ್ಲಿಯೂ ನಾಗಶೇಖರ್ ಕಾಣದ ಕಡಲಿಗೆ ಹಾಡು ಬಳಸಿಕೊಂಡು ಇದೇ ರೀತಿ ವಿವಾದಕ್ಕೆ ಗುರಿಯಾಗಿದ್ದರು.

Share this Story:

Follow Webdunia kannada