Webdunia - Bharat's app for daily news and videos

Install App

ನನ್ನ ಮದುವೇನಾ ನೋ ವೇ, ಅದಕ್ಕೆ ಸಮಯವಿಲ್ಲ: ಅನುಷ್ಕಾ

Webdunia
ಶುಕ್ರವಾರ, 22 ಮೇ 2015 (10:26 IST)
ಅರುಂಧತಿ ಚಿತ್ರ ನಟಿ ಅನುಷ್ಕ ಶೆಟ್ಟಿ ತಾರ ಬದುಕಲ್ಲಿ ಉಜ್ವಲವಾದ ತಿರುವು ತಂದಿತು. ಆವರೆಗೂ ಆಕೆ ಪ್ರೇಕ್ಷಕರ ಮುಂದೆ ಗ್ಲಾಮರ್ ಡಾಲ್ ಆಗಿ ಕಂಡು ಬಂದಿದ್ದಳು. ಆದರೆ ಅರುಂಧತಿಯ ಜೇಜಮ್ಮ ಪಾತ್ರ ಆಕೆಯಲ್ಲಿರುವ ಕಲಾವಿದೆಯನ್ನು ಜಗತ್ತಿನ ಮುಂದೆ ಇಟ್ಟಿದ್ದು ಸುಳ್ಳಲ್ಲ. ಆ ಪಾತ್ರವು ಆಕೆ ಬದುಕಲ್ಲಿ ಸಾಕಷ್ಟು ಬದಲಾವಣೆಗಳನ್ನು ನೀಡಿತು. 
ಅಷ್ಟೊಂದು ಹೆಸರು ನೀಡುವಂತೆ ಮಾಡಿದ ಆ ಪಾತ್ರದ ನಂತರ ಆಕೆ ಚಾಲೆಂಜಿಂಗ್ ಪಾತ್ರಗಳು, ಐತಿಹಾಸಿಕ ಪಾತ್ರಗಳನ್ನೂ ಮಾಡಲು ಆದ್ಯತೆ ನೀಡಲಾರಂಭಿಸಿದರು. ಆ ಪಟ್ಟಿಯಲ್ಲಿ ಸ್ವೀಟಿ ನಟನೆಯ ಕಾಕತೀಯ ರಾಜವಂಶದ ಕೀರ್ತಿ ಹೆಚ್ಚಿಸಿದ ಮಹಾರಾಣಿ ರುದ್ರಮ್ಮದೇವಿ ಪಾತ್ರ ಸೇರ್ಪಡೆಯಾಗಿದೆ. ಸದ್ಯದಲ್ಲೇ ಬಿಡುಗಡೆ ಆಗಲಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಪ್ರಸ್ತುತ ದ್ವಿಭಾಷೆಯಲ್ಲಿ ಸಿದ್ಧವಾಗುತ್ತಿರುವ ಜೀರೋ ಸೈಜ್ ಹೆಸರಿನ ಚಿತ್ರದಲ್ಲಿ ನಟಿಸುತ್ತಿರುವ ಅನುಷ್ಕಾಳ ಬದುಕಲ್ಲಿ ಬದಲಾವಣೆ ತರಲು ಆಕೆಯ ತಾಯಿ ತಂದೆಯರು ಸಿದ್ಧತೆ ನಡೆಸಿದ್ದಾರೆ. ಅಂದರೆ ಈಗ ಆಕೆಯ ಮದುವೆ ಬಗ್ಗೆ ಗಮನ ನೀಡುತ್ತಿದ್ದಾರೆ. ವಯಸ್ಸಿಗೆ ಬಂದ ಮಗಳಿಗಾಗಿ ಉತ್ತಮ ವರನ ಹುಡುಕಾಟದಲ್ಲಿ ಇದ್ದಾರೆ. ತನಗಾಗಿ ತನ್ನ ಪೋಷಕರು ವರಾನ್ವೇಷಣೆ ಮಾಡುತ್ತಿರುವುದು ಸತ್ಯ ಎಂದು ಆಕೆಯೇ ಹೇಳಿದ್ದಾಳೆ. 
 
ಆದರೆ ಅನುಷ್ಕಾ ಪೋಷಕರು ನೋಡಿದ ವರನನ್ನೋ ಅಥವಾ ತಾನು ಪ್ರೀತಿಸಿರುವ ಹುಡುಗನನ್ನು ವರಿಸಲಿದ್ದಾರೋ ಎಂಬ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ಮುಖ್ಯವಾಗಿ ನಟಿಯಾಗಿ ನನ್ನ ಕೆರಿಯರ್ ಮತ್ತಷ್ಟು ಉಜ್ವಲ ಮಾಡಿಕೊಳ್ಳಲು ಸಹಾಯಕಾರಿಯಾಗುವಂತೆ ಅನೇಕ ಅವಕಾಶಗಳು ದೊರಕುತ್ತಿರುವಾಗ ಮದುವೆ ಬಗ್ಗೆ ಆಲೋಚಿಸುವಷ್ಟು ಸಮಯ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments