Select Your Language

Notifications

webdunia
webdunia
webdunia
webdunia

ಸಹಜೀವನ, ಮದುವೆ ಎನ್ನುವ ಸಂಗತಿಗಳು ಸಂಪೂರ್ಣವಾಗಿ ವೈಯಕ್ತಿವಾದದ್ದು :ನಿತ್ಯ ಮೆನನ್

ಸಹಜೀವನ, ಮದುವೆ ಎನ್ನುವ ಸಂಗತಿಗಳು ಸಂಪೂರ್ಣವಾಗಿ ವೈಯಕ್ತಿವಾದದ್ದು :ನಿತ್ಯ ಮೆನನ್
, ಮಂಗಳವಾರ, 21 ಏಪ್ರಿಲ್ 2015 (11:40 IST)
ಸಹಜೀವನದ ಬಗ್ಗೆ ಸಿನಿಮಾ ಮಂದಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.ಅದರಲ್ಲೂ  ಬಾಲಿವುಡ್ ಮಂದಿ ಅದರ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈ ಸಹಜೀವ ಅಂದರೆ ಲಿವ್ ಇನ್ ರಿಲೇಶನ್ ಶಿಪ್  ಕಥಾ ಹಂದರ ಹೊಂದಿರುವ ಓಕೆ ಕಾದಲ್ ಕಣ್ಮಣಿ ಚಿತ್ರದಲ್ಲಿ  ನಿತ್ಯ ಮೆನನ್ ಮತ್ತು ದುಲ್ಕರ್ ಸಲ್ಮಾನ್ ನಟಿಸಿದ್ದಾರೆ.ಅಪರೂಪದ ಯಶಸ್ಸು ಪಡೆದಿರುವ ಈ ಚಿತ್ರದ ಬಗ್ಗೆ ಮಾತಾನಾಡುತ್ತಾ ಪ್ರಸಿದ್ಧ ಪತ್ರಿಕೆ ಒಂದಕ್ಕೆ ನಿತ್ಯ ಸಂದರ್ಶನ ನೀಡಿದ್ದಾಳೆ. ಅದರಲ್ಲಿ ಆಕೆ ಸಹಜೀವನದ ಬಗ್ಗೆ  ಸಂಚಲನ ಉಂಟು ಮಾಡುವಂತಹ ಮಾತನಾಡಿದ್ದಾಳೆ. 

ಸಹಜೀವನ, ಮದುವೆ ಎನ್ನುವ ಸಂಗತಿಗಳು ಸಂಪೂರ್ಣವಾಗಿ ವೈಯಕ್ತಿವಾದದ್ದು. ಯಾರೇ ಆಗಿರಲಿ ಅದರ  ಬಗ್ಗೆ ಯಾವುದೇ ರೀತಿಯಲ್ಲೂ ಕಾಮೆಂಟ್ ಮಾಡಬಾರದು. ಯಾರಿಗೂ ಆ ಬಗ್ಗೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. 
 
ಹಿಂದಿನ ಕಾಲದಲ್ಲಿ ಒಬ್ಬರನ್ನೊಬ್ಬರು ನೋಡದೆ ಇದ್ದರೂ ಸಹಿತ ಮದುವೆ ಆದ ಬಳಿಕ ಅನೇಕ ವಿಷಯಗಳಲ್ಲಿ ಹೊಂದಾಣಿಕೆ ಮಾಡಿಕೊಂಡು ಗಂಡಹೆಂಡತಿಯರು ಆರಾಮವಾಗಿ ಬದುಕಿದ್ದಾರೆ. ಈಗ ಬದಲಾದ ಪರಿಸ್ಥಿತಿಯಲ್ಲಿ ಸಹಜೀವನ ಮಾಡುತ್ತಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದೆ ಬಿಟ್ಟು ಬಿಡುತ್ತಿರುವಂತಹ ಅನೇಕ ಉದಾಹರಣೆಗಳು ಈಗಿನ ಸಮಾಜದಲ್ಲಿ ಬಹಳಷ್ಟಿದೆ ಎಂದು ಹೇಳಿ ಎಲ್ಲರ ಗಮನ ಆಕೆಯತ್ತ ತಿರುಗುವಂತೆ ಮಾಡಿದ್ದಾಳೆ. 
 
ಸಿನಿಮಾ ವಿಷಯಕ್ಕೆ ಬರುವುದಾದರೆ ಲವ್ ಕೆಮಿಸ್ಟ್ರಿ ಎಷ್ಟು ಸಹಜವಾಗಿದ್ದರೆ ಅಷ್ಟು ಇಷ್ಟವಾಗುತ್ತದೆ ಜನರಿಗೆ, ಅದ ಕಾರಣ ಪಾತ್ರವನ್ನು ಅರ್ಥ ಮಾಡಿಕೊಂಡು ನಟನೆಯತ್ತ ಗಮನ ನೀಡಿರುವುದಾಗಿ ಆಕೆ ಹೇಳಿದ್ದಾಳೆ. ಈ ಬೇಸಿಗೆಯ ಸಿನಿ ಸ್ಪರ್ಧೆಯಲ್ಲಿ ಅಲ್ಲೂ ಅರ್ಜುನ್ ಜೊತೆ ಸನ್ನಾಫ್ ಸತ್ಯ ಮೂರ್ತಿ, ಓಕೆ ಕಾದಲ್ ಕಣ್ಮಣಿ ಮತ್ತು ಕಾಂಚನ 2  ಯಶಸ್ಸಿನಿಂದ ಆಕೆಯತ್ತ ಈಗ  ಕಾಲಿವುಡ್ ನಿರ್ದೇಶಕ ಗೌತಮ್ ಮೆನನ್ ಅವರ ಗಮನ ಬಿದ್ದಿದೆ ಎನ್ನುವ ಸುದ್ದಿ ಇದೆ. 
 
ಯಾವುದೇ ರೀತಿಯಲ್ಲೂ ಎಕ್ಸ್ ಪೋಜಿಂಗ್ ಮಾಡಿಸದೆ ಹೀರೋಯಿನ್ ಗಳನ್ನೂ ಸಾಧಾರಣವಾದ ಉಡುಗೆಗಳ ಮೂಲಕವೇ ಇಷ್ಟ ಆಗುವಂತೆ ಮಾಡುವಂತಹ ಕಲೆ ಇರುವ ಗೌತಮ್ ಈಗ ನಿತ್ಯ ಅಭಿನಯ ನೋಡಿ ಇಷ್ಟಪಟ್ಟು ತಮ್ಮ ಮುಂದಿನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರಂತೆ. ಈ ಸುದ್ದಿ ನಿಜವಾದರೇ ಕಾಲಿವುಡ್ ಟಾಪ್ ಹೀರೋಯಿನ್ ಸ್ಥಾನ ನಿತ್ಯಾ ಮಡಿಲಿಗೆ ಎನ್ನುವುದನ್ನು ನೂರಕ್ಕೆ ನೂರರಷ್ಟು  ಸತ್ಯವಾದ ಮಾತಾಗುತ್ತದೆ.  

Share this Story:

Follow Webdunia kannada